ಸ್ಥಳದಲ್ಲಿಯೇ ಇದ್ದ ಪೊಲೀಸರನ್ನೂ ಜೋಶಿ ತರಾಟೆಗೆ ತೆಗೆದುಕೊಂಡು ‘ಮರ ಕಡಿಸಲು ನಿಮಗೆ ಯಾರು ಅನುಮತಿ ಕೊಟ್ಟಿದ್ದರು’ ಎಂದು ಪ್ರಶ್ನಿಸಿದರು. ಪೊಲೀಸ್ ಅಧಿಕಾರಿಯೊಬ್ಬರು ‘ಭದ್ರತೆಯ ಕಾರಣಕ್ಕಾಗಿ ಮರದ ಕೊಂಬೆಗಳನ್ನು ಮಾತ್ರ ಕತ್ತರಿಸುವಂತೆ ಹೇಳಿದ್ದೆವು. ಆದರೆ, ಪೂರ್ತಿಯಾಗಿ ಮರಗಳನ್ನು ಕಡಿದಿದ್ದಾರೆ’ ಎಂದರು. ಆಗ ಮತ್ತಷ್ಟು ಕೆಂಡಾಮಂಡಲವಾದ ಜೋಶಿ ‘ಭದ್ರತೆಯ ಕಾರಣವಿದ್ದರೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಹುದಿತ್ತು’ ಎಂದರು.