<p><strong>ಉಪ್ಪಿನಬೆಟಗೇರಿ</strong>: ‘ದುಷ್ಟ ಶಕ್ತಿಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆಮಾಚುವ ಕೆಲಸದಲ್ಲಿ ತೊಡಗಿವೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.</p>.<p>ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಆರ್.ಎಸ್.ಎಸ್. ವತಿಯಿಂದ ಧಾರವಾಡ ಗ್ರಾಮಾಂತರ ತಾಲ್ಲೂಕು ವಿಜಯದಶಮಿ ಉತ್ಸವ ಮತ್ತು ಪಥಸಂಚಲನ ನಂತರ ಜಯಕೀರ್ತಿ ಸಮುದಾಯ ಭವನದ ಆವರಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ದುಷ್ಟರ ಸಂಹಾರಕ್ಕೆ ಮಾತ್ರ ಆಯುಧ ಉಪಯೋಗಿಸಬೇಕೆಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ ಹೊರತು ಶಕ್ತಿ ಪ್ರದರ್ಶಿಸಲು ಅಲ್ಲ. ಚೀನಾ ಯುದ್ಧದಲ್ಲಿ ಕಮ್ಯುನಿಸ್ಟರ ಬಂಡವಾಳ ಏನು, ಆರ್.ಎಸ್.ಎಸ್. ಮಹಿಮೆ ಏನೆಂಬುದನ್ನು ಅರಿತ ಜವಾಹರಲಾಲ್ ನೆಹರೂ ಅವರು, ಜ.26ರ ಪಥಸಂಚಲನಕ್ಕೆ ಸಂಘವನ್ನು ಆಹ್ವಾನಿಸಿದ್ದರು’ ಎಂದರು.</p>.<p>ಧಾರವಾಡದ ಸಾಹಿತಿ ಪ್ರಕಾಶ ಭಟ್ ಮಾತನಾಡಿ, ‘ಹಳ್ಳಿಯ ಜನರ ಜತೆ ಬೆರೆತು ಅವರ ಕಷ್ಟ ಆಲಿಸಬೇಕು. ಕಾರ್ಯಕ್ರಮಗಳ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಹಳ್ಳಿಗರನ್ನು ಗೌರವಯುತವಾಗಿ ಕಾಣಬೇಕು. ಹಳ್ಳಿಗಳು ಇದ್ದರೆ ಮಾತ್ರ ನಗರಗಳು ಇರಲು ಸಾಧ್ಯ’ ಎಂದು ಹೇಳಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅಮೃತ ದೇಸಾಯಿ, ನಿಜನಗೌಡ ಪಾಟೀಲ, ಶಂಕರ ಮುಗದ, ಜಯಕೀರ್ತ ಕಟ್ಟಿ, ನಾಗರಾಜ ಗಾಣಿಗೇರ, ಶಶಿಮೌಳಿ ಕುಲಕರ್ಣಿ, ಮಹೇಶ ಯಲಿಗಾರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಬೆಟಗೇರಿ</strong>: ‘ದುಷ್ಟ ಶಕ್ತಿಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆಮಾಚುವ ಕೆಲಸದಲ್ಲಿ ತೊಡಗಿವೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.</p>.<p>ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಆರ್.ಎಸ್.ಎಸ್. ವತಿಯಿಂದ ಧಾರವಾಡ ಗ್ರಾಮಾಂತರ ತಾಲ್ಲೂಕು ವಿಜಯದಶಮಿ ಉತ್ಸವ ಮತ್ತು ಪಥಸಂಚಲನ ನಂತರ ಜಯಕೀರ್ತಿ ಸಮುದಾಯ ಭವನದ ಆವರಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ದುಷ್ಟರ ಸಂಹಾರಕ್ಕೆ ಮಾತ್ರ ಆಯುಧ ಉಪಯೋಗಿಸಬೇಕೆಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ ಹೊರತು ಶಕ್ತಿ ಪ್ರದರ್ಶಿಸಲು ಅಲ್ಲ. ಚೀನಾ ಯುದ್ಧದಲ್ಲಿ ಕಮ್ಯುನಿಸ್ಟರ ಬಂಡವಾಳ ಏನು, ಆರ್.ಎಸ್.ಎಸ್. ಮಹಿಮೆ ಏನೆಂಬುದನ್ನು ಅರಿತ ಜವಾಹರಲಾಲ್ ನೆಹರೂ ಅವರು, ಜ.26ರ ಪಥಸಂಚಲನಕ್ಕೆ ಸಂಘವನ್ನು ಆಹ್ವಾನಿಸಿದ್ದರು’ ಎಂದರು.</p>.<p>ಧಾರವಾಡದ ಸಾಹಿತಿ ಪ್ರಕಾಶ ಭಟ್ ಮಾತನಾಡಿ, ‘ಹಳ್ಳಿಯ ಜನರ ಜತೆ ಬೆರೆತು ಅವರ ಕಷ್ಟ ಆಲಿಸಬೇಕು. ಕಾರ್ಯಕ್ರಮಗಳ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಹಳ್ಳಿಗರನ್ನು ಗೌರವಯುತವಾಗಿ ಕಾಣಬೇಕು. ಹಳ್ಳಿಗಳು ಇದ್ದರೆ ಮಾತ್ರ ನಗರಗಳು ಇರಲು ಸಾಧ್ಯ’ ಎಂದು ಹೇಳಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅಮೃತ ದೇಸಾಯಿ, ನಿಜನಗೌಡ ಪಾಟೀಲ, ಶಂಕರ ಮುಗದ, ಜಯಕೀರ್ತ ಕಟ್ಟಿ, ನಾಗರಾಜ ಗಾಣಿಗೇರ, ಶಶಿಮೌಳಿ ಕುಲಕರ್ಣಿ, ಮಹೇಶ ಯಲಿಗಾರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>