<figcaption>""</figcaption>.<p><strong>ಹುಬ್ಬಳ್ಳಿ:</strong>ದೇಶಪಾಂಡೆ ಫೌಂಡೇಶನ್ನಕೌಶಲಾಭಿವೃದ್ಧಿಕೇಂದ್ರವನ್ನು ಭಾನುವಾರ ಉದ್ಘಾಟಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡುತಮ್ಮ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿದರು.</p>.<p>ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಹೆಸರಿಸಿದ ಅವರು, ವಿದೇಶದಿಂದ ತಾಯ್ನಾಡಿಗೆ ಮರಳಿ ಬಂದ ಡಾ.ಗುರುರಾಜ ದೇಶಪಾಂಡೆ ಅವರು ಹುಟ್ಟಿದ ನೆಲದ ಋಣ ತೀರಿಸಲು ತಮ್ಮ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಕುರಿತು ಕನ್ನಡದಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಯುವಜನತೆಗೆ ನಮ್ಮ ದೇಶ ಹಾಗೂ ನಾಡಿನ ಇತಿಹಾಸ ತಿಳಿಸಬೇಕು ಎಂದು ಹೇಳಿದ ಅವರು ಕನ್ನಡನಾಡಿನ ಬಸವೇಶ್ವರ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಅರಿಯಬೇಕು ಎಂದರಲ್ಲದೇ, ಭಗತ್ ಸಿಂಗ್, ಝಾನ್ಸಿ ರಾಣಿಲಕ್ಷ್ಮೀಬಾಯಿ, ಅಲ್ಲೂರು ಸೀತಾರಾಮರಾಜು ಮೊದಲಾದ ಮಹನೀಯರನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.</p>.<div style="text-align:center"><figcaption><em><strong>ದೇಶಪಾಂಡೆ ಫೌಂಡೇಶ್ನ ಮಕ್ಕಳೊಂದಿಗೆ ವೆಂಕಯ್ಯ ನಾಯ್ಡು</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಹುಬ್ಬಳ್ಳಿ:</strong>ದೇಶಪಾಂಡೆ ಫೌಂಡೇಶನ್ನಕೌಶಲಾಭಿವೃದ್ಧಿಕೇಂದ್ರವನ್ನು ಭಾನುವಾರ ಉದ್ಘಾಟಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡುತಮ್ಮ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿದರು.</p>.<p>ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಹೆಸರಿಸಿದ ಅವರು, ವಿದೇಶದಿಂದ ತಾಯ್ನಾಡಿಗೆ ಮರಳಿ ಬಂದ ಡಾ.ಗುರುರಾಜ ದೇಶಪಾಂಡೆ ಅವರು ಹುಟ್ಟಿದ ನೆಲದ ಋಣ ತೀರಿಸಲು ತಮ್ಮ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಕುರಿತು ಕನ್ನಡದಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಯುವಜನತೆಗೆ ನಮ್ಮ ದೇಶ ಹಾಗೂ ನಾಡಿನ ಇತಿಹಾಸ ತಿಳಿಸಬೇಕು ಎಂದು ಹೇಳಿದ ಅವರು ಕನ್ನಡನಾಡಿನ ಬಸವೇಶ್ವರ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಅರಿಯಬೇಕು ಎಂದರಲ್ಲದೇ, ಭಗತ್ ಸಿಂಗ್, ಝಾನ್ಸಿ ರಾಣಿಲಕ್ಷ್ಮೀಬಾಯಿ, ಅಲ್ಲೂರು ಸೀತಾರಾಮರಾಜು ಮೊದಲಾದ ಮಹನೀಯರನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.</p>.<div style="text-align:center"><figcaption><em><strong>ದೇಶಪಾಂಡೆ ಫೌಂಡೇಶ್ನ ಮಕ್ಕಳೊಂದಿಗೆ ವೆಂಕಯ್ಯ ನಾಯ್ಡು</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>