‘ಹಕ್ಕಿಗೆ ಗರಿ, ಕವಿಗೆ ಕವನ’ ಕುರಿತು ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಕೆ.ಸಿ. ಶಿವಾರೆಡ್ಡಿ, ‘ಬೇಂದ್ರೆ ಅವರ ಗರಿ ಕವನ ಸಂಕಲನದ ಪ್ರತಿ ಸಾಲು ಇಂದಿನ ಜ್ವಲಂತ ಸಮಸ್ಯೆ, ರಾಜಕೀಯವನ್ನು ವಿಡಂಬಿಸುವಂತಿದೆ. ಭೂಮಂಡಲದ ಮೇಲಿನ ದುಃಖ, ಅಸ್ಪೃಶ್ಯತೆ ನಿವಾರಣೆಯಾಗಬೇಕೆಂಬ ಬೇಂದ್ರೆಯವರ ಕಾವ್ಯದ ಆಶಯ ಇಂದಿಗೂ ಈಡೇರಿಲ್ಲ’ ಎಂದು ವಿಷಾದಿಸಿದರು.