ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದುಗೆ ಸ್ಥಾಪನೆ ವಿಚಾರ: ಸಮುದಾಯಗಳ ನಡುವೆ ಗಲಭೆ

Last Updated 15 ಡಿಸೆಂಬರ್ 2019, 14:54 IST
ಅಕ್ಷರ ಗಾತ್ರ

ಕುಂಸಿ: ಸಮೀಪದ ಹಾರನಹಳ್ಳಿಯಲ್ಲಿ ಮಾರಿಕಾಂಬ ದೇವಿಯ ಗದ್ದುಗೆ ಸ್ಥಾಪಿಸುವ ಸಂಬಂಧ ಭಾನುವಾರಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ಗಲಭೆ ನಡೆದಿದೆ.

ಮಾರಿಕಾಂಬ ದೇವಿಯ ಗದ್ದುಗೆ ಇರುವ ಜಾಗದಲ್ಲಿ ಹಿಂದೂ ಸಮುದಾಯದವರು ಗದ್ದುಗೆ ಸ್ಥಾಪಿಸಲು ಮುಂದಾದಾಗ, ‘ಮುಸ್ಲಿಂ ಸಮುದಾಯದವರು ಗದ್ದುಗೆವರೆಗಿನ ಜಾಗ ನಮಗೆ ಸೇರಿದ್ದು, ಇಲ್ಲಿ ಗದ್ದುಗೆ ಸ್ಥಾಪಿಸಬಾರದು ಎಂದರು. ಆಗ ಹಿಂದೂ ಸಮುದಾಯದವರು ಜಾಗ ನಮಗೆ ಸೇರಿದ್ದು ಎಂದಾಗ ಮಾತಿನ ಚಕಮಕಿ ನಡೆಯಿತು. ಜಗಳಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ, ಎಸ್‌ಪಿ ಶಾಂತರಾಜ್, ಡಿವೈಎಸ್‌ಪಿ, ತಹಶೀಲ್ದಾರ್, ಪಿಎಸ್ಐ ಸೇರಿ ಪೊಲೀಸ್ ಸಿಬ್ಬಂದಿ ಗಲಭೆ ನಿಯಂತ್ರಿಸಿದರು.

ಎರಡೂ ಸಮುದಾಯಗಳ ಅಹವಾಲು ಆಲಿಸಿದಶಾಸಕ ಅಶೋಕ್ ನಾಯ್ಕ, ‘ಎರಡು ಸಮುದಾಯದವರು ಜಾಗದ ದಾಖಲೆಗಳನ್ನು ತನ್ನಿ, ದಾಖಲೆಗಳನ್ನು ಪರಿಶೀಲಿಸಿ ಸೋಮವಾರ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಮನವೊಲಿಸಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.

ಮುಂಜಾಗ್ರತಾ ಕ್ರಮವಾಗಿ ಹಾರನಹಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT