ಮದುವೆಯಾಗಿ ಬಹಳ ವರ್ಷಗಳ ತನಕ ಹಕ್ಕಾಪಕ್ಕಿ ದಂಪತಿಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ನಂತರ ಅವಳಿ ಮಕ್ಕಳು ಜನಿಸಿದ್ದರು. ಒಂದು ವರ್ಷದ ನಂತರ ಈ ಹರಕೆ ತೀರಿಸಲು ಸೋಮವಾರ ನವಲಗುಂದಕ್ಕೆ ಹೋಗಿದ್ದರು. ಅಲ್ಲಿ ಹರಕೆ ತೀರಿಸಿ, ಮರಳಿ ಕೊಪ್ಪಳಕ್ಕೆ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅವಳಿ ಮಕ್ಕಳಲ್ಲಿ ಗಂಡು ಮಗು ಆರ್ಯ ಮೃತಪಟ್ಟಿದ್ದು, ಹೆಣ್ಣು ಮಗು ಆದ್ಯಾ ಅಪಾಯದಿಂದ ಪಾರಾಗಿದೆ.