‘ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಸಮಕ್ಷದಲ್ಲಿ ಕಾರ್ಮಿಕರನ್ನು ವಿಚಾರಿಸಲಾಗಿ, ಇಲ್ಲಿದ್ದ ಒಟ್ಟು 28 ಮಂದಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ತೆಲಂಗಾಣದಿಂದ ಕರೆತರಲಾಗಿತ್ತು. ಮುಂಗಡ ಹಣ ನೀಡಿದ್ದರಿಂದಾಗಿ ಗುತ್ತಿಗೆದಾರ ಅವರಿಗೆ ಕೂಲಿ ನೀಡುತ್ತಿರಲಿಲ್ಲ. ಕೆಲಸ ಮಾಡಿದ ದಿನದ ಕೂಲಿಯನ್ನು ಮುಂಗಡ ಹಣದಲ್ಲಿ ಕಳೆಯುತ್ತಿದ್ದ’ ಎಂದು ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.