ಪರಾರಿಯಾದ ಸೋಂಕಿತನನ್ನು ಆಜಾದ್ ಚವ್ಹಾಣ (28) ಎಂದು ಗುರುತಿಸಲಾಗಿದ್ದು, ಬಿಹಾರದವರು ಎನ್ನಲಾಗಿದೆ. ಈತ ಸದ್ಯ ಶಿರಹಟ್ಟಿ ತಾಲ್ಲೂಕಿನ ಸದ್ಭವ ಎಂಜಿನಿಯರಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಂಕು ದೃಢಪಟ್ಟ ಕಾರಣ ಆತ ಗುರುವಾರ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಕೋವಿಡ್ ಕೇರ್ ಸೆಂಟರ್ನಿಂದ ತಪ್ಪಿಸಿಕೊಂಡಿದ್ದಾನೆ.