<p><strong>ಲಕ್ಷ್ಮೇಶ್ವರ: </strong>ಸಮೀಪದ ಯಳವತ್ತಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಹತ್ತಾರು ಮನೆಗಳು ಜಲಾವೃತಗೊಂಡಿದ್ದು ನಿವಾಸಿಗಳು ಪರದಾಡುತ್ತಿದ್ದಾರೆ.</p>.<p>ಈ ಬಡಾವಣೆಯ ಮೇಲ್ಭಾಗದಲ್ಲಿನ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ಇಲ್ಲಿಗೆ ಹರಿದು ಬರುತ್ತದೆ. ಆದರೆ ನೀರು ಮುಂದಕ್ಕೆ ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಈ ತೊಂದರೆ ಕಟ್ಟಿಟ್ಟ ಬುತ್ತಿ.</p>.<p>‘ಮಳಿ ಬಂದರ ಸಾಕ್ರೀ ನೀರು ಕೇರಿಗೆ ಬರತೈತಿ. ದೊಡ್ಡ ಗಟಾರ ಕಟ್ಟಿಸಿದರ ಈ ತೊಂದ್ರಿ ತಪ್ಪತೈತಿ. ಆದರ ಯಾರೂ ಈ ಕಡೆ ಲಕ್ಷ್ಯ ಕೊಡವಲ್ರೀ’ ಎಂದು ನಗರದ ನಿವಾಸಿಗಳಾದ ಶಿವಪ್ಪ ಮೂಲಿಮನಿ, ಬಸವರಾಜ ಗೋದಿ, ದೇವಪ್ಪ ಚಿಣಗಿ, ಶರೀಫ ಮ್ಯಾಗೇರಿ, ಫಕ್ಕೀರೇಶ ಮಲೆಮ್ಮನವರ, ಕರಿಯಪ್ಪ ಬೀರಣ್ಣವರ, ಉಡಚಪ್ಪ ಕರೆಣ್ಣವರ ದೂರಿದರು.</p>.<p>‘ಭಾರಿ ಮಳೀಗ ನಮ್ಮ ಮನಿ ನೀರಾಗ ನಿಂತಾವ್ರೀ. ಹೊರಗ ಹೋಗಾಕೂ ಆಗವಲ್ದು’ ಎಂದು ಸ್ವಾರೆಪ್ಪ ಮಲೆಮ್ಮನವರ, ಹಾಲಮ್ಮ ಮಲೆಮ್ಮನವರ, ದುರ್ಗವ್ವ ಮಲೆಮ್ಮನವರ, ಲಕ್ಷ್ಮವ್ವ ಬೀರಣ್ಣವರ ಗೋಳು ತೋಡಿಕೊಂಡರು.</p>.<p>‘ಎಸ್ಟಿಪಿಸಿ ಯೋಜನೆಯಡಿ ಎಸ್ಸಿ ಕಾಲೋನಿಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಅನುದಾನ ನೀಡಿದೆ. ಆದರೆ ಜನಪ್ರತಿನಿಧಿಗಳು ಅನುದಾನ ಸರಿಯಾಗಿ ಬಳಸಿ ಅಭಿವೃದ್ಧಿ ಕೆಲಸ ಮಾಡಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ ಬೀರಣ್ಣವರ ಆಗ್ರಹಿಸಿದರು</p>.<p><strong>ಧರೆಗುರಳಿದ ಮನೆಗಳು:</strong> ಗ್ರಾಮದಲ್ಲಿ ಸುರಿದ ಮಳೆಗೆ ಅನೇಕ ಮನೆಗಳು ನೆಲ ಕಚ್ಚಿವೆ. ಮಹಾದೇವಿ ಪುರದ, ನರಗುಂದಮಠ ಅವರ ಮನೆಗಳು ಸೇರಿದಂತೆ ಇನ್ನೂ ಹಲವು ಮನೆಗಳು ಬಿದ್ದಿವೆ. ಗ್ರಾಮದ ಮಲ್ಲಿಕಾರ್ಜುನಗೌಡ ಪಿಡ್ಡನಗೌಡ್ರ ಅವರ ಮನೆಗೆ ನುಗ್ಗಿದ್ದ ನೀರನ್ನು ಮೋಟಾರ್ ಸಹಾಯದಿಂದ ಹೊರ ಹಾಕಲಾಯಿತು.</p>.<p><strong>ಬೆಳೆ ನಾಶ:</strong> ಕಂಠಿ ಶೇಂಗಾ ಮತ್ತು ಹರ ಗಿದ್ದ ಬಳ್ಳಿ ಶೇಂಗಾ ನಾಶವಾಗಿವೆ. ಅದರಂತೆ ಬಿಟಿ ಹತ್ತಿ ಮತ್ತು ಮೆಣಸಿನ ಕಾಯಿ ಹೊಲಗಳಲ್ಲಿ ನೀರು ನಿಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ: </strong>ಸಮೀಪದ ಯಳವತ್ತಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಹತ್ತಾರು ಮನೆಗಳು ಜಲಾವೃತಗೊಂಡಿದ್ದು ನಿವಾಸಿಗಳು ಪರದಾಡುತ್ತಿದ್ದಾರೆ.</p>.<p>ಈ ಬಡಾವಣೆಯ ಮೇಲ್ಭಾಗದಲ್ಲಿನ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ಇಲ್ಲಿಗೆ ಹರಿದು ಬರುತ್ತದೆ. ಆದರೆ ನೀರು ಮುಂದಕ್ಕೆ ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಈ ತೊಂದರೆ ಕಟ್ಟಿಟ್ಟ ಬುತ್ತಿ.</p>.<p>‘ಮಳಿ ಬಂದರ ಸಾಕ್ರೀ ನೀರು ಕೇರಿಗೆ ಬರತೈತಿ. ದೊಡ್ಡ ಗಟಾರ ಕಟ್ಟಿಸಿದರ ಈ ತೊಂದ್ರಿ ತಪ್ಪತೈತಿ. ಆದರ ಯಾರೂ ಈ ಕಡೆ ಲಕ್ಷ್ಯ ಕೊಡವಲ್ರೀ’ ಎಂದು ನಗರದ ನಿವಾಸಿಗಳಾದ ಶಿವಪ್ಪ ಮೂಲಿಮನಿ, ಬಸವರಾಜ ಗೋದಿ, ದೇವಪ್ಪ ಚಿಣಗಿ, ಶರೀಫ ಮ್ಯಾಗೇರಿ, ಫಕ್ಕೀರೇಶ ಮಲೆಮ್ಮನವರ, ಕರಿಯಪ್ಪ ಬೀರಣ್ಣವರ, ಉಡಚಪ್ಪ ಕರೆಣ್ಣವರ ದೂರಿದರು.</p>.<p>‘ಭಾರಿ ಮಳೀಗ ನಮ್ಮ ಮನಿ ನೀರಾಗ ನಿಂತಾವ್ರೀ. ಹೊರಗ ಹೋಗಾಕೂ ಆಗವಲ್ದು’ ಎಂದು ಸ್ವಾರೆಪ್ಪ ಮಲೆಮ್ಮನವರ, ಹಾಲಮ್ಮ ಮಲೆಮ್ಮನವರ, ದುರ್ಗವ್ವ ಮಲೆಮ್ಮನವರ, ಲಕ್ಷ್ಮವ್ವ ಬೀರಣ್ಣವರ ಗೋಳು ತೋಡಿಕೊಂಡರು.</p>.<p>‘ಎಸ್ಟಿಪಿಸಿ ಯೋಜನೆಯಡಿ ಎಸ್ಸಿ ಕಾಲೋನಿಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಅನುದಾನ ನೀಡಿದೆ. ಆದರೆ ಜನಪ್ರತಿನಿಧಿಗಳು ಅನುದಾನ ಸರಿಯಾಗಿ ಬಳಸಿ ಅಭಿವೃದ್ಧಿ ಕೆಲಸ ಮಾಡಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ ಬೀರಣ್ಣವರ ಆಗ್ರಹಿಸಿದರು</p>.<p><strong>ಧರೆಗುರಳಿದ ಮನೆಗಳು:</strong> ಗ್ರಾಮದಲ್ಲಿ ಸುರಿದ ಮಳೆಗೆ ಅನೇಕ ಮನೆಗಳು ನೆಲ ಕಚ್ಚಿವೆ. ಮಹಾದೇವಿ ಪುರದ, ನರಗುಂದಮಠ ಅವರ ಮನೆಗಳು ಸೇರಿದಂತೆ ಇನ್ನೂ ಹಲವು ಮನೆಗಳು ಬಿದ್ದಿವೆ. ಗ್ರಾಮದ ಮಲ್ಲಿಕಾರ್ಜುನಗೌಡ ಪಿಡ್ಡನಗೌಡ್ರ ಅವರ ಮನೆಗೆ ನುಗ್ಗಿದ್ದ ನೀರನ್ನು ಮೋಟಾರ್ ಸಹಾಯದಿಂದ ಹೊರ ಹಾಕಲಾಯಿತು.</p>.<p><strong>ಬೆಳೆ ನಾಶ:</strong> ಕಂಠಿ ಶೇಂಗಾ ಮತ್ತು ಹರ ಗಿದ್ದ ಬಳ್ಳಿ ಶೇಂಗಾ ನಾಶವಾಗಿವೆ. ಅದರಂತೆ ಬಿಟಿ ಹತ್ತಿ ಮತ್ತು ಮೆಣಸಿನ ಕಾಯಿ ಹೊಲಗಳಲ್ಲಿ ನೀರು ನಿಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>