<p><strong>ಮುಂಡರಗಿ:</strong> 'ಈರುಳ್ಳಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್ಗೆ ₹ 200 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈರುಳ್ಳಿ ಬೆಳೆದಿರುವ ರೈತರು ಡಿ.17ರೊಳಗೆ ತಾವು ಬೆಳೆದ ಈರುಳ್ಳಿಯನ್ನು ಪರವಾನಗಿ ಹೊಂದಿರುವ ವ್ಯಾಪಾರಸ್ಥರಲ್ಲಿ ಮಾರಾಟ ಮಾಡಬೇಕು' ಎಂದು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.</p>.<p>ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಗುರುವಾರ ತರಕಾರಿ ವ್ಯಾಪಾರಸ್ಥರು, ಎಪಿಎಂಸಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.</p>.<p>'ಸರ್ಕಾರ ಈರುಳ್ಳಿಗೆ ಗರಿಷ್ಠ ₹ 700 ಮೂಲ ಬೆಲೆಯನ್ನು ನಿಗದಿಗೊಳಿಸಿದ್ದು, ರೈತರಿಗೆ ವ್ಯತ್ಯಾಸದ ದರವನ್ನು ಮಾತ್ರ ನೀಡಲಾಗುವುದು. ಒಬ್ಬ ರೈತ ಗರಿಷ್ಠ 75 ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಸರ್ಕಾರದ ಹೋಜನೆಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.</p>.<p>ತರಕಾರಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ವಿಜಯಕುಮಾರ ಅಕ್ಕಿ ಮಾತನಾಡಿ, 'ಪ್ರತಿದಿನ ತರಕಾರಿ ಮಾರುಕಟ್ಟೆಗೆ ಬರುವ ಸುಮಾರು 500 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲಾಗುವುದು. ಆ ಮೂಲಕ ರೈತರಿಗೆ ನೆರವು ನೀಡಲಾಗುವುದು' ಎಂದು ತಿಳಿಸಿದರು.</p>.<p>'ಪಟ್ಟಣದ ತರಕಾರಿ ವ್ಯಾಪಾರಸ್ಥರು ರೈತರಿಂದ ಈರುಳ್ಳಿ ಖರೀದಿಸಿದರೆ, ಸಂಗ್ರಹಿಸಿಕೊಳ್ಳಲು ಎಪಿಎಂಸಿಯಲ್ಲಿರುವ ಉಗ್ರಾಣವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವಿದ್ದವರಿಗೆ ಕಂಪ್ಯೂಟರ್ ಹಾಗೂ ಒಬ್ಬ ಕಂಪ್ಯೂಟರ್ ನಿರ್ವಾಹಕರನ್ನು ನೀಡಲಾಗುವುದು' ಎಂದು ಅಧ್ಯಕ್ಷರು ಭರವಸೆ ನೀಡಿದರು.</p>.<p>ರೈತ ಮುಖಂಡ ಹೊಸಮನಿ ಮಾತನಾಡಿ, 'ನ.28ಕ್ಕಿಂತ ಪೂರ್ವದಲ್ಲಿ ರೈತರು ಮಾರಾಟ ಮಾಡಿರುವ ಈರುಳ್ಳಿಗೂ ₹ 200 ಪ್ರೋತ್ಸಾಹ ಧನ ನೀಡಬೇಕು' ಎಂದು ಮನವಿ ಮಾಡಿದರು. 'ಈ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳಬೇಕು' ಎಂದು ಅಧ್ಯಕ್ಷರು ತಿಳಿಸಿದರು.</p>.<p>ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, 'ರಾಜ್ಯದಲ್ಲಿ ಸುಮಾರು 1.53 ಹೆಕ್ಟೆರ್ ಪ್ರದೇಶದಲ್ಲಿ ಅಂದಾಜು 29 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ. ಅದಕ್ಕೆ ಪ್ರೋತ್ಸಾಹ ಧನ ನೀಡಲು ಸರ್ಕಾರ ₹ 50ರಿಂದ ₹ 75 ಕೋಟಿ ಬಳಸಲು ನಿರ್ಧರಿಸಿದೆ' ಎಂದು ಮಾಹಿತಿ ನೀಡಿದರು.</p>.<p>ಎಪಿಎಂಸಿ ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಮರಿಗೌಡ್ರ, ಕಾರ್ಯದರ್ಶಿ ಎನ್.ಎಚ್.ಈಶ್ವರಾಚಾರಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಈರಣ್ಣ ಬೇವಿನಮರದ, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಫರೀದ್ ಲೈನದ, ಕೊಟ್ರೇಶ ಅಂಗಡಿ, ಕಂದಾಯ ಇಲಾಖೆ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ:</strong> 'ಈರುಳ್ಳಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್ಗೆ ₹ 200 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈರುಳ್ಳಿ ಬೆಳೆದಿರುವ ರೈತರು ಡಿ.17ರೊಳಗೆ ತಾವು ಬೆಳೆದ ಈರುಳ್ಳಿಯನ್ನು ಪರವಾನಗಿ ಹೊಂದಿರುವ ವ್ಯಾಪಾರಸ್ಥರಲ್ಲಿ ಮಾರಾಟ ಮಾಡಬೇಕು' ಎಂದು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.</p>.<p>ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಗುರುವಾರ ತರಕಾರಿ ವ್ಯಾಪಾರಸ್ಥರು, ಎಪಿಎಂಸಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.</p>.<p>'ಸರ್ಕಾರ ಈರುಳ್ಳಿಗೆ ಗರಿಷ್ಠ ₹ 700 ಮೂಲ ಬೆಲೆಯನ್ನು ನಿಗದಿಗೊಳಿಸಿದ್ದು, ರೈತರಿಗೆ ವ್ಯತ್ಯಾಸದ ದರವನ್ನು ಮಾತ್ರ ನೀಡಲಾಗುವುದು. ಒಬ್ಬ ರೈತ ಗರಿಷ್ಠ 75 ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಸರ್ಕಾರದ ಹೋಜನೆಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.</p>.<p>ತರಕಾರಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ವಿಜಯಕುಮಾರ ಅಕ್ಕಿ ಮಾತನಾಡಿ, 'ಪ್ರತಿದಿನ ತರಕಾರಿ ಮಾರುಕಟ್ಟೆಗೆ ಬರುವ ಸುಮಾರು 500 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲಾಗುವುದು. ಆ ಮೂಲಕ ರೈತರಿಗೆ ನೆರವು ನೀಡಲಾಗುವುದು' ಎಂದು ತಿಳಿಸಿದರು.</p>.<p>'ಪಟ್ಟಣದ ತರಕಾರಿ ವ್ಯಾಪಾರಸ್ಥರು ರೈತರಿಂದ ಈರುಳ್ಳಿ ಖರೀದಿಸಿದರೆ, ಸಂಗ್ರಹಿಸಿಕೊಳ್ಳಲು ಎಪಿಎಂಸಿಯಲ್ಲಿರುವ ಉಗ್ರಾಣವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವಿದ್ದವರಿಗೆ ಕಂಪ್ಯೂಟರ್ ಹಾಗೂ ಒಬ್ಬ ಕಂಪ್ಯೂಟರ್ ನಿರ್ವಾಹಕರನ್ನು ನೀಡಲಾಗುವುದು' ಎಂದು ಅಧ್ಯಕ್ಷರು ಭರವಸೆ ನೀಡಿದರು.</p>.<p>ರೈತ ಮುಖಂಡ ಹೊಸಮನಿ ಮಾತನಾಡಿ, 'ನ.28ಕ್ಕಿಂತ ಪೂರ್ವದಲ್ಲಿ ರೈತರು ಮಾರಾಟ ಮಾಡಿರುವ ಈರುಳ್ಳಿಗೂ ₹ 200 ಪ್ರೋತ್ಸಾಹ ಧನ ನೀಡಬೇಕು' ಎಂದು ಮನವಿ ಮಾಡಿದರು. 'ಈ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳಬೇಕು' ಎಂದು ಅಧ್ಯಕ್ಷರು ತಿಳಿಸಿದರು.</p>.<p>ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, 'ರಾಜ್ಯದಲ್ಲಿ ಸುಮಾರು 1.53 ಹೆಕ್ಟೆರ್ ಪ್ರದೇಶದಲ್ಲಿ ಅಂದಾಜು 29 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ. ಅದಕ್ಕೆ ಪ್ರೋತ್ಸಾಹ ಧನ ನೀಡಲು ಸರ್ಕಾರ ₹ 50ರಿಂದ ₹ 75 ಕೋಟಿ ಬಳಸಲು ನಿರ್ಧರಿಸಿದೆ' ಎಂದು ಮಾಹಿತಿ ನೀಡಿದರು.</p>.<p>ಎಪಿಎಂಸಿ ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಮರಿಗೌಡ್ರ, ಕಾರ್ಯದರ್ಶಿ ಎನ್.ಎಚ್.ಈಶ್ವರಾಚಾರಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಈರಣ್ಣ ಬೇವಿನಮರದ, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಫರೀದ್ ಲೈನದ, ಕೊಟ್ರೇಶ ಅಂಗಡಿ, ಕಂದಾಯ ಇಲಾಖೆ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>