<p id="thickbox_headline"><strong>ನರಗುಂದ:</strong> ‘ಸಂತ್ರಸ್ತರ ನೆರವಿಗೆ ಸದಾ ಮುಂದೆ ಇರುವ ನಮ್ಮ ಗ್ರಾಮಸ್ಥರ ಮೇಲೆ ಲಕಮಾಪುರ ಯುವಕರು ಹೆಂಗಸರನ್ನು ಚುಡಾಯಿಸುತ್ತಾರೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ’ ಎಂದು ಬೆಳ್ಳೇರಿ ಗ್ರಾಮದ ಬಿಜೆಪಿ ಯುವ ಮುಖಂಡ ಬಾಬು ಹಿರೇಹೊಳಿ ಸ್ಪಷ್ಟಪಡಿಸಿದರು.</p>.<p>ತಾಲ್ಲೂಕಿನ ಬೆಳ್ಳೇರಿಯಲ್ಲಿ ಲಕಮಾಪುರ ಹಾಗೂ ಬೆಳ್ಳೇರಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬೆಳ್ಳೇರಿ ಗ್ರಾಮಸ್ಥರು ಲಕಮಾಪುರ ಗ್ರಾಮದ ಎಲ್ಲರಿಗೂ ನಿರಂತರ ಸಹಾಯ, ಸಹಕಾರ ನೀಡುತ್ತಿದ್ದೇವೆ. ಈ ಆರೋಪ ನಿರಾಧಾರವಾದುದು. ಲಕಮಾಪುರ ಯುವಕರು ಸುಮ್ಮನೇ ಹೇಳಿಕೆ ನೀಡುವುದು ಸಲ್ಲ. ಲಕಮಾಪುರ ಜನತೆಗೆ ಇಲ್ಲಿಯ ಕಾಳಜಿ ಕೇಂದ್ರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗೆ ಸಹಕಾರ ನೀಡಿದ್ದೇವೆ, ಮುಂದೆಯೂ ನೀಡಲಾಗುವುದು’ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/karnataka-floods-2020-754216.html" target="_blank">ಗದಗ | ‘ಚುಡಾಯಿಸ್ತಾರ್ರೀ, ನಾವು ಅಲ್ಲಿಗೆ ಹೋಗಂಗಿಲ್ಲ’</a></p>.<p>ಲಕಮಾಪುರದ ವೆಂಕನಗೌಡ ನಡಮನಿ ಮಾತನಾಡಿ, ‘ಬೆಳ್ಳೇರಿ ಮತ್ತು ಲಕಮಾಪುರ ಗ್ರಾಮಸ್ಥರು ಹಿಂದಿನಿಂದಲೂ ಸೌಹಾರ್ದದಿಂದ ಇದ್ದೇವೆ. ನಮ್ಮ ಊರಿನ ಯುವಕರು ಈ ರೀತಿ ಹೇಳಿಕೆ ನೀಡಬಾರದಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ. ಮುಂದೆಯೂ ಪರಸ್ಪರ ಬಾಂಧವ್ಯದಿಂದ ಇರುತ್ತೇವೆ’ ಎಂದರು.</p>.<p>ಸಭೆಯಲ್ಲಿ ಎರಡೂ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ನರಗುಂದ:</strong> ‘ಸಂತ್ರಸ್ತರ ನೆರವಿಗೆ ಸದಾ ಮುಂದೆ ಇರುವ ನಮ್ಮ ಗ್ರಾಮಸ್ಥರ ಮೇಲೆ ಲಕಮಾಪುರ ಯುವಕರು ಹೆಂಗಸರನ್ನು ಚುಡಾಯಿಸುತ್ತಾರೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ’ ಎಂದು ಬೆಳ್ಳೇರಿ ಗ್ರಾಮದ ಬಿಜೆಪಿ ಯುವ ಮುಖಂಡ ಬಾಬು ಹಿರೇಹೊಳಿ ಸ್ಪಷ್ಟಪಡಿಸಿದರು.</p>.<p>ತಾಲ್ಲೂಕಿನ ಬೆಳ್ಳೇರಿಯಲ್ಲಿ ಲಕಮಾಪುರ ಹಾಗೂ ಬೆಳ್ಳೇರಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬೆಳ್ಳೇರಿ ಗ್ರಾಮಸ್ಥರು ಲಕಮಾಪುರ ಗ್ರಾಮದ ಎಲ್ಲರಿಗೂ ನಿರಂತರ ಸಹಾಯ, ಸಹಕಾರ ನೀಡುತ್ತಿದ್ದೇವೆ. ಈ ಆರೋಪ ನಿರಾಧಾರವಾದುದು. ಲಕಮಾಪುರ ಯುವಕರು ಸುಮ್ಮನೇ ಹೇಳಿಕೆ ನೀಡುವುದು ಸಲ್ಲ. ಲಕಮಾಪುರ ಜನತೆಗೆ ಇಲ್ಲಿಯ ಕಾಳಜಿ ಕೇಂದ್ರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗೆ ಸಹಕಾರ ನೀಡಿದ್ದೇವೆ, ಮುಂದೆಯೂ ನೀಡಲಾಗುವುದು’ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/karnataka-floods-2020-754216.html" target="_blank">ಗದಗ | ‘ಚುಡಾಯಿಸ್ತಾರ್ರೀ, ನಾವು ಅಲ್ಲಿಗೆ ಹೋಗಂಗಿಲ್ಲ’</a></p>.<p>ಲಕಮಾಪುರದ ವೆಂಕನಗೌಡ ನಡಮನಿ ಮಾತನಾಡಿ, ‘ಬೆಳ್ಳೇರಿ ಮತ್ತು ಲಕಮಾಪುರ ಗ್ರಾಮಸ್ಥರು ಹಿಂದಿನಿಂದಲೂ ಸೌಹಾರ್ದದಿಂದ ಇದ್ದೇವೆ. ನಮ್ಮ ಊರಿನ ಯುವಕರು ಈ ರೀತಿ ಹೇಳಿಕೆ ನೀಡಬಾರದಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ. ಮುಂದೆಯೂ ಪರಸ್ಪರ ಬಾಂಧವ್ಯದಿಂದ ಇರುತ್ತೇವೆ’ ಎಂದರು.</p>.<p>ಸಭೆಯಲ್ಲಿ ಎರಡೂ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>