ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ‘ಹೆಂಗಸರನ್ನು ಚುಡಾಯಿಸುತ್ತಾರೆ ಆರೋಪ ಸತ್ಯಕ್ಕೆ ದೂರ’

Last Updated 18 ಆಗಸ್ಟ್ 2020, 17:38 IST
ಅಕ್ಷರ ಗಾತ್ರ

ನರಗುಂದ: ‘ಸಂತ್ರಸ್ತರ ನೆರವಿಗೆ ಸದಾ ಮುಂದೆ ಇರುವ ನಮ್ಮ ಗ್ರಾಮಸ್ಥರ ಮೇಲೆ ಲಕಮಾಪುರ ಯುವಕರು ಹೆಂಗಸರನ್ನು ಚುಡಾಯಿಸುತ್ತಾರೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ’ ಎಂದು ಬೆಳ್ಳೇರಿ ಗ್ರಾಮದ ಬಿಜೆಪಿ ಯುವ ಮುಖಂಡ ಬಾಬು ಹಿರೇಹೊಳಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಬೆಳ್ಳೇರಿಯಲ್ಲಿ ಲಕಮಾಪುರ ಹಾಗೂ ಬೆಳ್ಳೇರಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳ್ಳೇರಿ ಗ್ರಾಮಸ್ಥರು ಲಕಮಾಪುರ ಗ್ರಾಮದ ಎಲ್ಲರಿಗೂ ನಿರಂತರ ಸಹಾಯ, ಸಹಕಾರ ನೀಡುತ್ತಿದ್ದೇವೆ. ಈ ಆರೋಪ ನಿರಾಧಾರವಾದುದು. ಲಕಮಾಪುರ ಯುವಕರು ಸುಮ್ಮನೇ ಹೇಳಿಕೆ ನೀಡುವುದು ಸಲ್ಲ. ಲಕಮಾಪುರ ಜನತೆಗೆ ಇಲ್ಲಿಯ ಕಾಳಜಿ ಕೇಂದ್ರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗೆ ಸಹಕಾರ ನೀಡಿದ್ದೇವೆ, ಮುಂದೆಯೂ ನೀಡಲಾಗುವುದು’ ಎಂದರು.

ಲಕಮಾಪುರದ ವೆಂಕನಗೌಡ ನಡಮನಿ ಮಾತನಾಡಿ, ‘ಬೆಳ್ಳೇರಿ ಮತ್ತು ಲಕಮಾಪುರ ಗ್ರಾಮಸ್ಥರು ಹಿಂದಿನಿಂದಲೂ ಸೌಹಾರ್ದದಿಂದ ಇದ್ದೇವೆ. ನಮ್ಮ ಊರಿನ ಯುವಕರು ಈ ರೀತಿ ಹೇಳಿಕೆ ನೀಡಬಾರದಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ. ಮುಂದೆಯೂ ಪರಸ್ಪರ ಬಾಂಧವ್ಯದಿಂದ ಇರುತ್ತೇವೆ’ ಎಂದರು.

ಸಭೆಯಲ್ಲಿ ಎರಡೂ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT