‘ನಮ್ಮ ಅತ್ತೆಯವರಾದ ಹಾಲವ್ವ ವೆಂಕಟೇಶಪ್ಪ ಗದಗಿನ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅತ್ತೆ ಸೇರಿ ಒಟ್ಟು ಐದು ಜನ ಪಡಿತರ ಚೀಟಿಯಲ್ಲಿ ಸದಸ್ಯರಿದ್ದು ನಮ್ಮದು ಬಿಪಿಎಲ್ ಕಾರ್ಡ್ ಇದೆ. ಆದ್ರೆ ಸರ್ಕಾರದ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿ ಹಣ ₹ 850 ನಮ್ಮ ಅತ್ತೆವರ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರಿಂದ ಈ ಯೋಜನೆಯಿಂದ ನಮ್ಮ ಕುಟುಂಬ ವಂಚಿತವಾಗಿದೆ’ ಬಿಪಿಎಲ್ ಚೀಟಿದಾರರಾದ ಗ್ರಾಮದ ಶೋಭಾ ಭೀಮಪ್ಪ ಗದಗಅಸಮಾಧಾನ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ ನಾವು ಎಲ್ಲ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಂಡಿದ್ದೇವೆ. ಇನ್ನೂ ಹಣ ಜಮಾ ಆಗಿಲ್ಲ