ʼಕೋವಿಡ್-19 ಬಳಿಕ ವಿದ್ಯಾರ್ಥಿಗಳಲ್ಲಿ ಕಾಲೇಜಿಗೆ ಬರುವುದಕ್ಕೆ ಆಸಕ್ತಿ ಕಡಿಮೆಯಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಗೈರಾಗುತ್ತಿರುವುದರಿಂದ ಇತ್ತೀಚಿನ ವರ್ಷಗಳಿಂದ ಕಾಲೇಜಿನ ಫಲಿತಾಂಶ ಕಡಿಮೆಯಾಗುತ್ತಿದೆ
ಬಿ.ಬಿ.ಗುರಿಕಾರ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಗಜೇಂದ್ರಗಡ
ನಮ್ಮ ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಪ್ರಾಚಾರ್ಯರು ಮೂವರು ಉಪನ್ಯಾಸಕರು ಹಾಗೂ ಡಿ ದರ್ಜೆ ನೌಕರರ ಕೊರತೆಯಿದೆ. ಅಲ್ಲದೆ ಕಟ್ಟಡದ ಬಣ್ಣ ಮಾಸಿದ್ದು ಕಾಲೇಜಿನ ಅಂದ ಮಾಸಿದಂತಿದೆ
ಎಸ್.ಆರ್.ಕರಮಡಿ ಪ್ರಭಾರ ಪ್ರಾಚಾರ್ಯ ಡಾ.ವೀರಪ್ಪ ಸಂಕನೂರ ಸರ್ಕಾರಿ ಪಿಯು ಕಾಲೇಜು ನಿಡಗುಂದಿ
ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದ್ದು ಖಾಲಿಯಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೀಡಲಾಗಿದೆ
ಜಿ.ಎನ್.ಕುರ್ತಕೋಟಿ ಡಿಡಿಪಿಐ ಗದಗ
ಕಾಲೇಜಿಗೆ ಕಿಡಿಗೇಡಿಗಳ ಕಾಟ
ಗಜೇಂದ್ರಗಡದ ಸರ್ಕಾರಿ ಪಿಯು ಕಾಲೇಜು ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಬಾಲಕರ ಸರ್ಕಾರಿ ಪ್ರೌಢಶಾಲೆ ಮೌಲಾನಾ ಆಜಾದ್ ಶಾಲೆ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿವೆ. ಆವರಣಕ್ಕೆ ಎರಡು ಮುಖ್ಯದ್ವಾರಗಳಿದ್ದು ಒಂದು ಕಡೆ ಗೇಟ್ ಅಳವಡಿಸಿಲ್ಲ. ಹೀಗಾಗಿ ಆವರಣದಲ್ಲಿ ಹೊರಗಿನ ಜನರು ಆಟವಾಡುವುದು ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿವೆ. ಅಲ್ಲದೆ ಕಿಡಿಗೇಡಿಗಳು ಶಾಲೆ-ಕಾಲೇಜುಗಳ ಕಿಟಕಿ ಗಾಜು ಒಡೆಯುವುದು ಎಲ್ಲೆಂದರಲ್ಲಿ ಗಲಿಜು ಮಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.