ನರಗುಂದ: ತಾಲ್ಲೂಕಿನ ಕುರಗೋವಿನಕೊಪ್ಪದ ಮಹೇಶ ಪಾಂಡಪ್ಪ ನಾಯ್ಕರ ನರಗುಂದದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನಲ್ಲಿ ಹತ್ತು ವರ್ಷಗಳ ಹಿಂದೆ ₹44,500 ಅಲ್ಪಾವಧಿ ಸಾಲ ಪಡೆದಿದ್ದರು. ಅದು 2017ರಲ್ಲಿ ಮನ್ನಾ ಆಗಿದೆ. ಆದರೂ ಸಾಲ ತುಂಬುವಂತೆ ಪದೇ ಪದೇ ಬ್ಯಾಂಕ್ನಿಂದ ನೋಟಿಸ್ ಬರುತ್ತಿದೆ. ಇದರಿಂದ ರೈತ ಮಹೇಶ ಆತಂಕಗೊಂಡಿದ್ದಾರೆ. ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಶೀಲ್ದಾರ್ಗೆ ತಿಳಿಸಿದ್ದಾರೆ.