<p><strong>ಗದಗ:</strong> ‘ದೇಹವನ್ನು ಸಮತೋಲನಗೊಳಿಸಿ; ಆತ್ಮಶಕ್ತಿಯನ್ನು ಉನ್ನತಗೊಳಿಸುವ ಮಲ್ಲಕಂಬದಂತಹ ಕ್ರೀಡೆಯ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಗದಗ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.</p>.<p>ನಗರದ ಕಳಸಾಪುರ ರಸ್ತೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.</p>.<p>‘ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗದುಗಿನ ಕೀರ್ತಿ ತರುವಂತೆ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಶ್ರಮಿಸಬೇಕು. ಇವರ ಮುಂದಾಳತ್ವದಲ್ಲಿ ಮಲ್ಲಕಂಬ ಕ್ರೀಡೆ ಯಶಸ್ವಿಯಾಗಲಿ’ ಎಂದರು.</p>.<p>ಕಳಸಾಪುರ ಗ್ರಾಮದ ಹಿರಿಯ ಮುಖಂಡ ಶರದರಾವ್ ಹುಯಿಲಗೋಳ ಮಾತನಾಡಿ, ‘ಮಲ್ಲಕಂಬವು ಭಾರತದಲ್ಲಿ ಹುಟ್ಟಿದ ಶಕ್ತಿ ಮತ್ತು ಶಾರೀರಿಕ ಕೌಶಲ್ಯದ ಪ್ರಾಚೀನ ಕಲೆ. ಶತಮಾನಗಳಿಂದಲೂ ಇದು ವಿಶೇಷ ಸ್ಥಾನ ಪಡೆದಿದೆ’ ಎಂದರು.</p>.<p>‘ಪೈಲ್ವಾನರು ಮತ್ತು ಯೋಧರು ಶಕ್ತಿಯ ಅಭ್ಯಾಸಕ್ಕೆ ಮಲ್ಲಕಂಬ ಬಳಸಿ ಶಿಸ್ತು ಮತ್ತು ಶಕ್ತಿಯನ್ನು ಬೆಳೆಸಿದರು. ಮೈಸೂರಿನ ಅರಮನೆ, ವಿಜಯನಗರ ಸಾಮ್ರಾಜ್ಯ, ಬದಾಮಿ ಚಾಲುಕ್ಯರು ಮತ್ತು ಹಳ್ಳಿಯ ಅಖಾಡಗಳಲ್ಲಿ ಈ ಕಲೆ ತನ್ನ ಬಂಗಾರದ ಯುಗವನ್ನು ಕಂಡಿತು. ಹಳ್ಳಿಗಳ ಅಖಾಡಗಳಲ್ಲಿ ಶಿಸ್ತಿನ ವ್ಯಾಯಾಮವಾಗಿ ಬೆಳೆದ ಮಲ್ಲಕಂಬ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.</p>.<p>ಉದ್ಯಮಿ ಶಂಕರ ಹಾನಗಲ್ ಮಾತನಾಡಿ, ‘ಚಾಲುಕ್ಯ ಮಲ್ಲಕಂಬ ಅಕಾಡೆಮಿ ಗದಗ ಜಿಲ್ಲೆಯಲ್ಲಿ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ತರಬೇತಿ ಸಂಸ್ಥೆಯಾಗಿದೆ. ಮಲ್ಲಕಂಬದ ವಿವಿಧ ಶೈಲಿಗಳ ತರಬೇತಿಯನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಪಡೆದು, ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು’ ಎಂದರು.</p>.<p>ಚಾಲುಕ್ಯ ಮಲ್ಲಕಂಬ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ವಿಜಯ ಚನ್ನಗೋಣಿ ಮಾತನಾಡಿ, ‘ಮಲ್ಲಕಂಬ ಕ್ರೀಡೆಗೆ ಪ್ರವೇಶ ತರಗತಿಗಳು ಪ್ರಾರಂಭಗೊಂಡಿದ್ದು, ಕ್ರೀಡಾಪಟುಗಳು ಸೆಪ್ಟೆಂಬರ್ 1ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ. ಆಸಕ್ತರು 89046 72543 ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳಬಹುದು’ ಎಂದರು. </p>.<p>ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಸಿದ್ದು ಪಾಟೀಲ, ಮಹೇಶ ರಂಗಣ್ಣವರ, ಸಚಿನ್ ಮಲ್ಲಾಪೂರ, ದೀಪಕ್ ದಾನಿ, ಕೆ.ಎಸ್.ಗಂಗನಗೌಡರ, ಪರಶುರಾಮ ಹಬೀಬ, ಶಿವು ಸಿದ್ದರಾಮಸ್ವಾಮಿಮಠ, ಮಾರುತಿ ಮರೆಯಪ್ಪನವರ ಸೇರಿದಂತೆ ಮಲ್ಲಕಂಬ ತರಬೇತುದಾರರು, ಕ್ರೀಡಾಪಟುಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ದೇಹವನ್ನು ಸಮತೋಲನಗೊಳಿಸಿ; ಆತ್ಮಶಕ್ತಿಯನ್ನು ಉನ್ನತಗೊಳಿಸುವ ಮಲ್ಲಕಂಬದಂತಹ ಕ್ರೀಡೆಯ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಗದಗ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.</p>.<p>ನಗರದ ಕಳಸಾಪುರ ರಸ್ತೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.</p>.<p>‘ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗದುಗಿನ ಕೀರ್ತಿ ತರುವಂತೆ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಶ್ರಮಿಸಬೇಕು. ಇವರ ಮುಂದಾಳತ್ವದಲ್ಲಿ ಮಲ್ಲಕಂಬ ಕ್ರೀಡೆ ಯಶಸ್ವಿಯಾಗಲಿ’ ಎಂದರು.</p>.<p>ಕಳಸಾಪುರ ಗ್ರಾಮದ ಹಿರಿಯ ಮುಖಂಡ ಶರದರಾವ್ ಹುಯಿಲಗೋಳ ಮಾತನಾಡಿ, ‘ಮಲ್ಲಕಂಬವು ಭಾರತದಲ್ಲಿ ಹುಟ್ಟಿದ ಶಕ್ತಿ ಮತ್ತು ಶಾರೀರಿಕ ಕೌಶಲ್ಯದ ಪ್ರಾಚೀನ ಕಲೆ. ಶತಮಾನಗಳಿಂದಲೂ ಇದು ವಿಶೇಷ ಸ್ಥಾನ ಪಡೆದಿದೆ’ ಎಂದರು.</p>.<p>‘ಪೈಲ್ವಾನರು ಮತ್ತು ಯೋಧರು ಶಕ್ತಿಯ ಅಭ್ಯಾಸಕ್ಕೆ ಮಲ್ಲಕಂಬ ಬಳಸಿ ಶಿಸ್ತು ಮತ್ತು ಶಕ್ತಿಯನ್ನು ಬೆಳೆಸಿದರು. ಮೈಸೂರಿನ ಅರಮನೆ, ವಿಜಯನಗರ ಸಾಮ್ರಾಜ್ಯ, ಬದಾಮಿ ಚಾಲುಕ್ಯರು ಮತ್ತು ಹಳ್ಳಿಯ ಅಖಾಡಗಳಲ್ಲಿ ಈ ಕಲೆ ತನ್ನ ಬಂಗಾರದ ಯುಗವನ್ನು ಕಂಡಿತು. ಹಳ್ಳಿಗಳ ಅಖಾಡಗಳಲ್ಲಿ ಶಿಸ್ತಿನ ವ್ಯಾಯಾಮವಾಗಿ ಬೆಳೆದ ಮಲ್ಲಕಂಬ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.</p>.<p>ಉದ್ಯಮಿ ಶಂಕರ ಹಾನಗಲ್ ಮಾತನಾಡಿ, ‘ಚಾಲುಕ್ಯ ಮಲ್ಲಕಂಬ ಅಕಾಡೆಮಿ ಗದಗ ಜಿಲ್ಲೆಯಲ್ಲಿ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ತರಬೇತಿ ಸಂಸ್ಥೆಯಾಗಿದೆ. ಮಲ್ಲಕಂಬದ ವಿವಿಧ ಶೈಲಿಗಳ ತರಬೇತಿಯನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಪಡೆದು, ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು’ ಎಂದರು.</p>.<p>ಚಾಲುಕ್ಯ ಮಲ್ಲಕಂಬ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ವಿಜಯ ಚನ್ನಗೋಣಿ ಮಾತನಾಡಿ, ‘ಮಲ್ಲಕಂಬ ಕ್ರೀಡೆಗೆ ಪ್ರವೇಶ ತರಗತಿಗಳು ಪ್ರಾರಂಭಗೊಂಡಿದ್ದು, ಕ್ರೀಡಾಪಟುಗಳು ಸೆಪ್ಟೆಂಬರ್ 1ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ. ಆಸಕ್ತರು 89046 72543 ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳಬಹುದು’ ಎಂದರು. </p>.<p>ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಸಿದ್ದು ಪಾಟೀಲ, ಮಹೇಶ ರಂಗಣ್ಣವರ, ಸಚಿನ್ ಮಲ್ಲಾಪೂರ, ದೀಪಕ್ ದಾನಿ, ಕೆ.ಎಸ್.ಗಂಗನಗೌಡರ, ಪರಶುರಾಮ ಹಬೀಬ, ಶಿವು ಸಿದ್ದರಾಮಸ್ವಾಮಿಮಠ, ಮಾರುತಿ ಮರೆಯಪ್ಪನವರ ಸೇರಿದಂತೆ ಮಲ್ಲಕಂಬ ತರಬೇತುದಾರರು, ಕ್ರೀಡಾಪಟುಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>