ತಾಲ್ಲೂಕಿನ ಹತ್ತಾರು ಹೆಕ್ಟೇರ್ನಲ್ಲಿ ರೈತರು ಮಾವಿನಹಣ್ಣು ಬೆಳೆಯುತ್ತಿದ್ದರೂ ಧಾರವಾಡ, ಹಾನಗಲ್, ಶಿರಸಿ, ಯಲ್ಲಾಪುರ, ಶಿಗ್ಗಾವ್, ಸವಣೂರು, ಕಲಘಟಗಿ, ಬೆಳಗಾವಿಗಳಿಂದ ಲಕ್ಷ್ಮೇಶ್ವರ ಮಾರುಕಟ್ಟೆಗೆ ಹಣ್ಣು ಬರುತ್ತದೆ. ಪಟ್ಟಣದಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಪ ಸಮಯದಲ್ಲಿ ಗ್ರಾಹಕರು ಹಣ್ಣು ಖರೀದಿಸಲು ಆಗುವುದಿಲ್ಲ. ವಾರ್ಡ್ಗಳಲ್ಲಿ ತಳ್ಳುವ ಗಾಡಿಗಳಲ್ಲಿ ಹಣ್ಣು ಮಾರಾಟಕ್ಕೂ ಅನುಮತಿ ಇದೆ. ಆದರೆ ದೂರದ ಪ್ರದೇಶಗಳಿಗೆ ಗಾಡಿಗಳು ಹೋಗುವುದಿಲ್ಲ. ಹೀಗಾಗಿ ಗ್ರಾಹಕರ ಕೈಗೆ ಹಣ್ಣುಗಳು ನಿಲುಕುತ್ತಿಲ್ಲ.