<p><strong>ನರಗುಂದ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ದೀಪಾವಳಿ ಎರಡನೇ ದಿನ ಮಂಗಳವಾರ ಅಮಾವಾಸ್ಯೆಯನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷ್ಮಿ ಪೂಜೆ ಸಂಭ್ರಮದಿಂದ ನಡೆಯಿತು. ನಗರ ಪ್ರದೇಶಗಳಲ್ಲಿ ಬಲಿಪಾಡ್ಯವನ್ನು ಜೋರಾಗಿ ಆಚರಿಸಿದರು.</p>.<p>ತಾಲ್ಲೂಕಿನಾದ್ಯಂತ ದೀಪಾವಳಿ ಸಂಭ್ರಮ ಕಂಡುಬಂದಿತು. ಅತಿವೃಷ್ಟಿಯ ಸಂಕಷ್ಟದ ನಡುವೆಯೂ ಸಂಪ್ರದಾಯ, ಸಂಸ್ಕೃತಿ ದ್ಯೋತಕವಾಗಿ ಮನೆ, ಅಂಗಡಿಗಳಲ್ಲಿ ಹಾಗೂ ವಾಹನಗಳ ಪೂಜೆ ಅಲಂಕಾರಯುಕ್ತವಾಗಿ ನಡೆಯಿತು.</p>.<p><strong>ಖರೀದಿ ಜೋರು</strong>: ಸೋಮವಾರ ಮಂಕಾಗಿದ್ದ ಖರೀದಿ ವಹಿವಾಟು ಎರಡನೇ ದಿನ ಜೋರಾಗಿತ್ತು. ಅದರಲ್ಲೂ ಹೂ, ಹಣ್ಣು ಖರೀದಿ ಹೆಚ್ಚಿದ್ದು, ಅಧಿಕ ದರದಲ್ಲಿ ಮಾರಾಟವಾದವು.</p>.<p><strong>ನೇಪಥ್ಯಕ್ಕೆ ಸರಿದ ಆಕಾಶಬುಟ್ಟಿಗಳು:</strong> ದೀಪಾವಳಿ ಬಂತೆಂದರೆ ಪ್ರತಿ ಮನೆಯಲ್ಲೂ ಬಿದಿರು ಸೀಳಿ, ವರ್ಣಗಳ ಕಾಗದ ಅಂಟಿಸಿ ತೂಗುಹಾಕಿ ದೀಪ ಹಚ್ಚಲಾಗುತ್ತಿತ್ತು. ಆದರೆ ಅವುಗಳು ಇಲ್ಲವಾಗಿ ರೆಡಿಮೇಡ್ ಆಕಾಶಬುಟ್ಟಿಗಳನ್ನು ಎಲ್ಲ ಅಂಗಡಿಗಳಲ್ಲಿ ಮಾರಾಟ ಮಾಡಲು ಇಡಲಾಗಿದ್ದು ಹೆಚ್ಚಿನ ಅಂಗಡಿಗಳಲ್ಲಿ ಅವುಗಳ ಮಾರಾಟ ನಡೆಯಿತು.</p>.<p><strong>ಚಿಣ್ಣರ ಪಟಾಕಿ ಸಂಭ್ರಮ</strong>: ಚಿಣ್ಣರು ನವನವೀನ ವೇಷಭೂಷಣಗಳೊಂದಿಗೆ ಮಿಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಭಯಮಿಶ್ರಿತ ರೋಮಾಂಚನಗೊಂಡರು. ದೀಪಾವಳಿ ಎರಡನೇ ದಿನ ತಾಲ್ಲೂಕಿನಲ್ಲಿ ಸಂಭ್ರಮ ಕಂಡು ಬಂದು ಬಲಿಪಾಡ್ಯ ಪೂಜೆಗೆ ತಯಾರಿ ಜೋರಾಗಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ದೀಪಾವಳಿ ಎರಡನೇ ದಿನ ಮಂಗಳವಾರ ಅಮಾವಾಸ್ಯೆಯನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷ್ಮಿ ಪೂಜೆ ಸಂಭ್ರಮದಿಂದ ನಡೆಯಿತು. ನಗರ ಪ್ರದೇಶಗಳಲ್ಲಿ ಬಲಿಪಾಡ್ಯವನ್ನು ಜೋರಾಗಿ ಆಚರಿಸಿದರು.</p>.<p>ತಾಲ್ಲೂಕಿನಾದ್ಯಂತ ದೀಪಾವಳಿ ಸಂಭ್ರಮ ಕಂಡುಬಂದಿತು. ಅತಿವೃಷ್ಟಿಯ ಸಂಕಷ್ಟದ ನಡುವೆಯೂ ಸಂಪ್ರದಾಯ, ಸಂಸ್ಕೃತಿ ದ್ಯೋತಕವಾಗಿ ಮನೆ, ಅಂಗಡಿಗಳಲ್ಲಿ ಹಾಗೂ ವಾಹನಗಳ ಪೂಜೆ ಅಲಂಕಾರಯುಕ್ತವಾಗಿ ನಡೆಯಿತು.</p>.<p><strong>ಖರೀದಿ ಜೋರು</strong>: ಸೋಮವಾರ ಮಂಕಾಗಿದ್ದ ಖರೀದಿ ವಹಿವಾಟು ಎರಡನೇ ದಿನ ಜೋರಾಗಿತ್ತು. ಅದರಲ್ಲೂ ಹೂ, ಹಣ್ಣು ಖರೀದಿ ಹೆಚ್ಚಿದ್ದು, ಅಧಿಕ ದರದಲ್ಲಿ ಮಾರಾಟವಾದವು.</p>.<p><strong>ನೇಪಥ್ಯಕ್ಕೆ ಸರಿದ ಆಕಾಶಬುಟ್ಟಿಗಳು:</strong> ದೀಪಾವಳಿ ಬಂತೆಂದರೆ ಪ್ರತಿ ಮನೆಯಲ್ಲೂ ಬಿದಿರು ಸೀಳಿ, ವರ್ಣಗಳ ಕಾಗದ ಅಂಟಿಸಿ ತೂಗುಹಾಕಿ ದೀಪ ಹಚ್ಚಲಾಗುತ್ತಿತ್ತು. ಆದರೆ ಅವುಗಳು ಇಲ್ಲವಾಗಿ ರೆಡಿಮೇಡ್ ಆಕಾಶಬುಟ್ಟಿಗಳನ್ನು ಎಲ್ಲ ಅಂಗಡಿಗಳಲ್ಲಿ ಮಾರಾಟ ಮಾಡಲು ಇಡಲಾಗಿದ್ದು ಹೆಚ್ಚಿನ ಅಂಗಡಿಗಳಲ್ಲಿ ಅವುಗಳ ಮಾರಾಟ ನಡೆಯಿತು.</p>.<p><strong>ಚಿಣ್ಣರ ಪಟಾಕಿ ಸಂಭ್ರಮ</strong>: ಚಿಣ್ಣರು ನವನವೀನ ವೇಷಭೂಷಣಗಳೊಂದಿಗೆ ಮಿಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಭಯಮಿಶ್ರಿತ ರೋಮಾಂಚನಗೊಂಡರು. ದೀಪಾವಳಿ ಎರಡನೇ ದಿನ ತಾಲ್ಲೂಕಿನಲ್ಲಿ ಸಂಭ್ರಮ ಕಂಡು ಬಂದು ಬಲಿಪಾಡ್ಯ ಪೂಜೆಗೆ ತಯಾರಿ ಜೋರಾಗಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>