ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ನರಗುಂದ|ಸರ್ಕಾರಿ ಎಂಜನಿಯರಿಂಗ್ ಕಾಲೇಜು: ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರವೇಶ

Published : 12 ಅಕ್ಟೋಬರ್ 2025, 7:06 IST
Last Updated : 12 ಅಕ್ಟೋಬರ್ 2025, 7:06 IST
ಫಾಲೋ ಮಾಡಿ
Comments
ಕಾಲೇಜು ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಲಾಗುತ್ತಿದೆ. ವಿಭಾಗದ ಮುಖ್ಯಸ್ಥರ ನೇಮಕಾತಿಗೆ ವಸತಿ ನಿಲಯಗಳ ಸ್ಥಾಪನೆಗೆ ತಾಂತ್ರಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ
ಸಿದ್ದನಗೌಡ ಪಾಟೀಲ ಪ್ರಾಚಾರ್ಯ
ಹಲವಾರು ಕೊರತೆಗಳ ನಡುವೆ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ವಸತಿ ನಿಲಯ ಸೇರಿದಂತೆ ಅಗತ್ಯ ಇರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು
ಸಚಿನ್ ಅಂತಿಮ ವರ್ಷದ ವಿದ್ಯಾರ್ಥಿ
100 ಕೊಠಡಿ 8 ಜನ ಡಿ ಗ್ರುಪ್ ನೌಕರರು
ವಿಶಾಲವಾದ ಕಟ್ಟಡ ಪ್ರಯೋಗಾಲಯಗಳಿದ್ದು ಅದಕ್ಕೆ ತಕ್ಕಂತೆ ಸುಮಾರು 20 ಜನವಾದರೂ ಡಿ.ಗ್ರುಪ್ ನೌಕರರು ಬೇಕು. ಆದರೆ ಈಗ ಇರುವುದು ಕೇವಲ 8 ಜನ. ಆದ್ದರಿಂದ ಹೆಚ್ಚಿನ ನೇಮಕಾತಿ ಅಗತ್ಯವಿದೆ ಎಂದು ಕಾಲೇಜು ಸಿಬ್ಬಂದಿ ಹೇಳುತ್ತಾರೆ. ಎರಡೇ ವಸತಿ ನಿಲಯ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಎರಡು ವಿದ್ಯಾರ್ಥಿನಿಯರಿಗೆ ಎರಡು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಬೇಕು. ಆದರೆ ಈಗ ಕೇವಲ ತಲಾ ಒಂದೊಂದು ವಸತಿ ನಿಲಯಗಳಿವೆ. ಇವುಗಳ ನಿರ್ವಹಣೆಯನ್ನು ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿಯೇ ಮಾಡುತ್ತಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿದೆ. ಆದ್ದರಿಂದ ತಾಂತ್ರಿಕ ಶಿಕ್ಷಣ ಇಲಾಖೆ ಕನಿಷ್ಟ ನಾಲ್ಕು ವಸತಿ ನಿಲಯ ನಿರ್ಮಿಸಿ ಅವುಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಾರೆ.
ಮುಖ್ಯಸ್ಥರೇ ಇಲ್ಲ ಅತಿಥಿಗಳೇ ಎಲ್ಲಾ
ಪ್ರಾಚಾರ್ಯರೊಬ್ಬರೇ ಶಾಶ್ವತ ಸಿಬ್ಬಂದಿ ಯಾಗಿದ್ದಾರೆ. ಗ್ರಂಥಪಾಲಕರು ಪ್ರಥಮ ದರ್ಜೆ ಸಹಾಯಕರು ಬೋಧಕೇತರ ಸಿಬ್ಬಂದಿ. 27 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಇದರಿಂದ ನಾಲ್ಕು ಉತ್ತಮ ತಾಂತ್ರಿಕ ಕೋರ್ಸ್‌ಗಳಿದ್ದರೂ ಅದಕ್ಕೆ ಪೂರ್ಣಕಾಲಿಕ ಮುಖ್ಯಸ್ಛರೇ ಇಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಅನುಭವಿ ಉಪನ್ಯಾಸಕರ ಬೋಧನೆ ಕೊರತೆ ಕಾಡುತ್ತಿದೆ. ಇದರಿಂದ ಒಂದು ವಿಭಾಗಕ್ಕೆ ಒಬ್ಬ ಮುಖ್ಯಸ್ಥರನ್ನಾದರೂ ಸರ್ಕಾರ ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT