ಶಿವಾನಂದ ಹಿರೇಮನಿ ಅವರ ಜತೆಗೆ, ಪದವೀಧರರಾದ ರಾಮಣ್ಣ ನಾಯ್ಕರ, ಶಿವಪ್ಪ ಮಾದರ, ಸಿದ್ದನಗೌಡ ಪಾಟೀಲ, ಭೀಮನಗೌಡ ಪಾಟೀಲ, ನಭಿಸಾಬ ನದಾಫ್, ಕಿರಣ ಮಲ್ಲಾಪೂರ ಅವರೂ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ಬರಗಾಲ ಇರುವುದರಿಂದ ಸ್ಥಳೀಯ ಮಟ್ಟದಲ್ಲಿ ‘ನರೇಗಾ’ ಬಿಟ್ಟು, ಸದ್ಯ ಬೇರೆ ಯಾವುದೇ ಉದ್ಯೋಗಾವಕಾಶಗಳಿಲ್ಲ ಎನ್ನುತ್ತಾರೆ ಈ ಪದವೀಧರರು.