<p><strong>ಲಕ್ಷ್ಮೇಶ್ವರ</strong>: ಮೈ ಮುರಿದು ದುಡಿದರೂ ಉಳ್ಳಾಗಡ್ಡಿ ಬೆಳೆಗಾರರಿಗೆ ಲಾಭ ಸಿಗುತ್ತಿಲ್ಲ. ಅತಿವೃಷ್ಟಿಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಇಳುವರಿ ಸಾಕಷ್ಟು ಕುಸಿದಿದೆ. ಇಂಥ ಸಮಯದಲ್ಲಿ ಬೆಲೆಯೂ ಪಾತಾಳಕ್ಕೆ ಇಳಿದಿರುವುದು ಅನ್ನದಾತ ಕಣ್ಣೀರು ಹಾಕುವಂತೆ ಮಾಡಿದೆ.</p>.<p>ತಾಲ್ಲೂಕಿನ ಅಡರಕಟ್ಟಿ, ಪುಟಗಾಂವ್ಬಡ್ನಿ, ಮಾಗಡಿ, ಯಳವತ್ತಿ, ಬಟ್ಟೂರ, ಗೊಜನೂರ, ಮಾಡಳ್ಳಿ, ರಾಮಗೇರಿ, ಬಸಾಪುರ, ಗೋವನಾಳ ಮತ್ತಿತರ ಕಡೆಗಳಲ್ಲಿ ಸಾವಿರಾರು ಹೆಕ್ಟೇರ್ನಲ್ಲಿ ಉಳ್ಳಾಗಡ್ಡಿ ಪ್ರತಿವರ್ಷ ಬೆಳೆಯಲಾಗುತ್ತದೆ.</p>.<p>ಕಳೆದ ವರ್ಷ ಉಳ್ಳಾಗಡ್ಡಿಗೆ ಉತ್ತಮ ದರ ಸಿಕ್ಕಿತ್ತು. ಈ ವರ್ಷವೂ ಅದೇ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಈ ವರ್ಷ ಕೂಡ ಉಳ್ಳಾಗಡ್ಡಿ ಬೆಳೆದಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಬೆಳೆದ ಬೆಳೆ ನಂತರ ಸುರಿದ ನಿರಂತರ ಮಳೆಯಿಂದ ಹಾಳಾಗಿದೆ. ಇದೀಗ ಉಳಿದ ಬೆಳೆಯನ್ನಾದರೂ ಕೊಯ್ಲು ಮಾಡಿ ಮಾರಾಟ ಮಾಡಬೇಕೆಂದರೆ ಬೆಲೆ ಕುಸಿದಿದ್ದು, ರೈತರನ್ನು ಕಂಗೆಡಿಸಿದೆ.</p>.<p>ಬೀಜ, ಗೊಬ್ಬರ, ಕ್ರಿಮಿನಾಶಕ, ಔಷಧೋಪಚಾರಕ್ಕಾಗಿ ರೈತರು ಎಕರೆಗೆ ಕನಿಷ್ಠ ₹30 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಕ್ವಿಂಟಲ್ಗೆ ಕೇವಲ ₹500ರಿಂದ ₹800ಕ್ಕೆ ಮಾರಾಟ ಆಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರು ಮಾಡಿದ ಖರ್ಚು-ವೆಚ್ಚವೂ ಬರುವುದಿಲ್ಲ. ಹೀಗಾಗಿ ಅನೇಕ ರೈತರು ಬೆಳೆಯನ್ನು ಜಮೀನಿನಿಂದ ಹೊರ ತೆಗೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ.</p>.<p>‘ಕಷ್ಟಪಟ್ಟು ಉಳ್ಳಾಗಡ್ಡಿ ಬೆಳೆದಿದ್ದರೂ ಲಾಭ ಹೋಗಲಿ ಕೊನೆಯ ಪಕ್ಷ ಅಸಲು ಸಹ ರೈತರಿಗೆ ಸಿಗದ ಪರಿಸ್ಥಿತಿ ಇದೆ. ಆದಕಾರಣ ಸರ್ಕಾರ ಕೂಡಲೇ ಉಳ್ಳಾಗಡ್ಡಿ ಬೆಳೆಗಾರರಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಭಾರತೀಯ ಕೃಷಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.</p>.<p>‘ಮಹಾರಾಷ್ಟ್ರದ ಉಳ್ಳಾಗಡ್ಡಿ ಶೇಖರಣೆ ಇನ್ನೂ ಸಾಕಷ್ಟು ಇದೆ. ಅದು ಮಾರಾಟ ಆಗುವವರೆಗೆ ನಮ್ಮ ಭಾಗದ ಉಳ್ಳಾಗಡ್ಡಿ ಮಾರಾಟ ಆಗುವುದು ಕಡಿಮೆ. ಅಲ್ಲದೆ ರಫ್ತು ಬಂದ್ ಆಗಿದೆ. ಹೀಗಾಗಿ ಉಳ್ಳಾಗಡ್ಡಿ ಬೆಲೆ ಕಡಿಮೆ ಆಗಿದೆ’ ಎಂದು ಠೋಕ ವ್ಯಾಪಾರಸ್ಥರು ಹೇಳುತ್ತಾರೆ.</p><p>---</p>.<p>ತೋಟಗಾರಿಕೆ ಕೃಷಿ ಕಂದಾಯ ಇಲಾಖೆಯಿಂದ ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಲಾಗಿದೆ. ಸಮಗ್ರ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು..</p><p><strong>-ಎಂ. ಧನಜಂಯ ತಹಶೀಲ್ದಾರ್</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ</strong>: ಮೈ ಮುರಿದು ದುಡಿದರೂ ಉಳ್ಳಾಗಡ್ಡಿ ಬೆಳೆಗಾರರಿಗೆ ಲಾಭ ಸಿಗುತ್ತಿಲ್ಲ. ಅತಿವೃಷ್ಟಿಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಇಳುವರಿ ಸಾಕಷ್ಟು ಕುಸಿದಿದೆ. ಇಂಥ ಸಮಯದಲ್ಲಿ ಬೆಲೆಯೂ ಪಾತಾಳಕ್ಕೆ ಇಳಿದಿರುವುದು ಅನ್ನದಾತ ಕಣ್ಣೀರು ಹಾಕುವಂತೆ ಮಾಡಿದೆ.</p>.<p>ತಾಲ್ಲೂಕಿನ ಅಡರಕಟ್ಟಿ, ಪುಟಗಾಂವ್ಬಡ್ನಿ, ಮಾಗಡಿ, ಯಳವತ್ತಿ, ಬಟ್ಟೂರ, ಗೊಜನೂರ, ಮಾಡಳ್ಳಿ, ರಾಮಗೇರಿ, ಬಸಾಪುರ, ಗೋವನಾಳ ಮತ್ತಿತರ ಕಡೆಗಳಲ್ಲಿ ಸಾವಿರಾರು ಹೆಕ್ಟೇರ್ನಲ್ಲಿ ಉಳ್ಳಾಗಡ್ಡಿ ಪ್ರತಿವರ್ಷ ಬೆಳೆಯಲಾಗುತ್ತದೆ.</p>.<p>ಕಳೆದ ವರ್ಷ ಉಳ್ಳಾಗಡ್ಡಿಗೆ ಉತ್ತಮ ದರ ಸಿಕ್ಕಿತ್ತು. ಈ ವರ್ಷವೂ ಅದೇ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಈ ವರ್ಷ ಕೂಡ ಉಳ್ಳಾಗಡ್ಡಿ ಬೆಳೆದಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಬೆಳೆದ ಬೆಳೆ ನಂತರ ಸುರಿದ ನಿರಂತರ ಮಳೆಯಿಂದ ಹಾಳಾಗಿದೆ. ಇದೀಗ ಉಳಿದ ಬೆಳೆಯನ್ನಾದರೂ ಕೊಯ್ಲು ಮಾಡಿ ಮಾರಾಟ ಮಾಡಬೇಕೆಂದರೆ ಬೆಲೆ ಕುಸಿದಿದ್ದು, ರೈತರನ್ನು ಕಂಗೆಡಿಸಿದೆ.</p>.<p>ಬೀಜ, ಗೊಬ್ಬರ, ಕ್ರಿಮಿನಾಶಕ, ಔಷಧೋಪಚಾರಕ್ಕಾಗಿ ರೈತರು ಎಕರೆಗೆ ಕನಿಷ್ಠ ₹30 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಕ್ವಿಂಟಲ್ಗೆ ಕೇವಲ ₹500ರಿಂದ ₹800ಕ್ಕೆ ಮಾರಾಟ ಆಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರು ಮಾಡಿದ ಖರ್ಚು-ವೆಚ್ಚವೂ ಬರುವುದಿಲ್ಲ. ಹೀಗಾಗಿ ಅನೇಕ ರೈತರು ಬೆಳೆಯನ್ನು ಜಮೀನಿನಿಂದ ಹೊರ ತೆಗೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ.</p>.<p>‘ಕಷ್ಟಪಟ್ಟು ಉಳ್ಳಾಗಡ್ಡಿ ಬೆಳೆದಿದ್ದರೂ ಲಾಭ ಹೋಗಲಿ ಕೊನೆಯ ಪಕ್ಷ ಅಸಲು ಸಹ ರೈತರಿಗೆ ಸಿಗದ ಪರಿಸ್ಥಿತಿ ಇದೆ. ಆದಕಾರಣ ಸರ್ಕಾರ ಕೂಡಲೇ ಉಳ್ಳಾಗಡ್ಡಿ ಬೆಳೆಗಾರರಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಭಾರತೀಯ ಕೃಷಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.</p>.<p>‘ಮಹಾರಾಷ್ಟ್ರದ ಉಳ್ಳಾಗಡ್ಡಿ ಶೇಖರಣೆ ಇನ್ನೂ ಸಾಕಷ್ಟು ಇದೆ. ಅದು ಮಾರಾಟ ಆಗುವವರೆಗೆ ನಮ್ಮ ಭಾಗದ ಉಳ್ಳಾಗಡ್ಡಿ ಮಾರಾಟ ಆಗುವುದು ಕಡಿಮೆ. ಅಲ್ಲದೆ ರಫ್ತು ಬಂದ್ ಆಗಿದೆ. ಹೀಗಾಗಿ ಉಳ್ಳಾಗಡ್ಡಿ ಬೆಲೆ ಕಡಿಮೆ ಆಗಿದೆ’ ಎಂದು ಠೋಕ ವ್ಯಾಪಾರಸ್ಥರು ಹೇಳುತ್ತಾರೆ.</p><p>---</p>.<p>ತೋಟಗಾರಿಕೆ ಕೃಷಿ ಕಂದಾಯ ಇಲಾಖೆಯಿಂದ ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಲಾಗಿದೆ. ಸಮಗ್ರ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು..</p><p><strong>-ಎಂ. ಧನಜಂಯ ತಹಶೀಲ್ದಾರ್</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>