ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏ.8ರಂದು ಬೆಳಿಗ್ಗೆ 8ಕ್ಕೆ ಭೋಪಳಾಪೂರ ಗ್ರಾಮದಲ್ಲಿ ಶ್ರೀಗಳಿಗೆ ಗುರುವಂದನೆ ನಡೆಯಲಿದೆ. ಗ್ರಾಮದ ಹಳೆಯ ಬೀರದೇವರ ದೇವಸ್ಥಾನದಿಂದ ಎರಡು ಆನೆ, ಎರಡು ಒಂಟೆ, ನಾಲ್ಕು ಕುದುರೆ, ಮುತ್ತೈದೆಯರಿಂದ 108 ಕುಂಭಮೇಳ, 108 ಆರತಿ, ಡೊಳ್ಳು ಸೇರಿ ಇತರೆ ವಾದ್ಯ ವೈಭವಗಳೊಂದಿಗೆ ಅವರನ್ನು ಸ್ವಾಗತಿಸಲಾಗುವುದು. ಬೆಳಿಗ್ಗೆ 10ಕ್ಕೆ ಸಣ್ಣಕ್ಕಿ ಅವರ ಜಮೀನಿನಲ್ಲಿ ‘ಚೈತನ್ಯ’ ಆಸ್ಪತ್ರೆಯ ಭೂಮಿಪೂಜೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ 14 ದೇವಸ್ಥಾನಗಳಲ್ಲಿ ಅಭಿಷೇಕ, ಪೂಜೆ ನಡೆಯಲಿದೆ ಎಂದು ಹೇಳಿದರು.