<p><strong>ಮುಂಡರಗಿ:</strong> 'ಸ್ವಾನುಭವ ಹಾಗೂ ತನ್ನ ಸುತ್ತಮುತ್ತ ಜರುಗುವ ಸಂಗತಿಗಳ ಸೂಕ್ಷ್ಮತೆ ಗಮನಿಸುವ ಕವಿಗಳ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಪ್ರಾಸಗಳ ಜೊತೆಗೆ ಅಕ್ಷರ ಜೋಡಣೆಯು ಕವಿತೆಗಳ ಅಂದವನ್ನು ಹೆಚ್ಚಿಸುತ್ತವೆ' ಎಂದು ಹಿರಿಯ ಸಾಹಿತಿ ಆರ್.ಎಲ್.ಪೋಲಿಸ್ ಪಾಟೀಲ ತಿಳಿಸಿದರು.</p>.<p>ತಾಲ್ಲೂಕು ಕಸಾಪ ಹಾಗೂ ಶರಣ ಸಾಹಿತ್ಯ ಪರಿಷತ್ತುಗಳು ಸೋಮವಾರ ಇಲ್ಲಿಯ ಕ.ರಾ.ಬೆಲ್ಲದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಇಳೆ-ಮಳೆ' ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾರನಾಡಿದರು.</p>.<p>ಶ್ರೇಷ್ಟ ಸಾಹಿತ್ಯ ಜನಪದರ ಅಂಗಳದಲ್ಲಿ ಹುಟ್ಟುತ್ತದೆ. ಬರಿಗಣ್ಣಿನಿಂದ ಕಂಡದ್ದನ್ನು ಒಳಗಣ್ಣಿನಿಂದ ಆಸ್ವಾಧಿಸಿ ಅದ್ದನ್ನು ಅಕ್ಷರ ರೂಪಕ್ಕಿಳಿಸುವುದು ಸವಾಲಿನ ಕೆಲಸವಾಗಿದ್ದು, ಶ್ರೇಷ್ಟ ಕವಿಗಳು ಮಾತ್ರ ಅದನ್ನು ಸಾಧಿಸಬಲ್ಲರು ಎಂದು ಅಭಿಪ್ರಾಯಪಟ್ಟರು.</p>.<p>ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಓದು, ಬರಹ ಬಲ್ಲವರೆಲ್ಲ ಬರೆದ ಕವಿತೆಗಳು ಕವಿತೆಗಳಾಗಲಾರವು. ಭಾವನೆಗಳನ್ನು ಅಚ್ಚು ಕಟ್ಟಾಗಿ ಅಕ್ಷರ ರೂಪದಲ್ಲಿ ಸೆರೆ ಹಿಡಿದಾಗ ಮಾತ್ರ ಅದು ಉತ್ತಮ ಕಾವ್ಯವಾಗಬಲ್ಲದು ಎಂದು ತಿಳಿಸಿದರು.</p>.<p>ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ತಾಲ್ಲೂಕಿನ ಎಲ್ಲ ಸಾಹಿತ್ಯಾಸಕ್ತರ ನೆರವಿನಿಂದ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲು ಸಾದ್ಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.</p>.<p>ನಿಂಗು ಸೊಲಗಿ ಮಾತನಾಡಿದರು. ಹಿರಿಯ ಕವಿ ಶಂಕರ ಕುಕನೂರ ಅವರು ಕವಿಗೋಷ್ಠಿಯ ನೇತೃತ್ವ ವಹಿಸಿಕೊಂಡಿದ್ದರು. 16ಕವಿಗಳು 'ಇಳೆ-ಮಳೆ' ಕುರಿತು ಕವನ ವಾಚಿಸಿದರು.</p>.<p>ರಮೇಶಗೌಡ ಪಾಟೀಲ ಪ್ರಾರ್ಥಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು. ಎಂ.ಐ.ಮುಲ್ಲಾ ವಂದಿಸಿದರು.</p>.<p>ಸಿ.ಕೆ.ಗಣಪ್ಪನವರ, ಸುರೇಶ ಬಾವಿಹಳ್ಳಿ, ಕೃಷ್ಣಾ ಸಾವುಕಾರ, ಮಂಜುಳಾ ಇಟಗಿ, ಪಾಲಾಕ್ಷಿ ಗಣದಿನ್ನಿ, ಶೋಭಾ ಮೇಟಿ, ಎಂ.ಎನ್.ಶಿರನಹಳ್ಳಿ, ರವಿ ದೇವರೆಡ್ಡಿ, ಸಂತೋಷ ಮುರುಡಿ, ಗಿರಿಜಾ ಸೂಡಿ, ಕಳಕಪ್ಪ ಜಲ್ಲಿಗೇರಿ, ಕೊಟ್ರೇಶ ಜವಳಿ,ಮೊಹನ ಪಾಟೀಲ, ಈರಣ್ಣ ಸೊರಟೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ:</strong> 'ಸ್ವಾನುಭವ ಹಾಗೂ ತನ್ನ ಸುತ್ತಮುತ್ತ ಜರುಗುವ ಸಂಗತಿಗಳ ಸೂಕ್ಷ್ಮತೆ ಗಮನಿಸುವ ಕವಿಗಳ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಪ್ರಾಸಗಳ ಜೊತೆಗೆ ಅಕ್ಷರ ಜೋಡಣೆಯು ಕವಿತೆಗಳ ಅಂದವನ್ನು ಹೆಚ್ಚಿಸುತ್ತವೆ' ಎಂದು ಹಿರಿಯ ಸಾಹಿತಿ ಆರ್.ಎಲ್.ಪೋಲಿಸ್ ಪಾಟೀಲ ತಿಳಿಸಿದರು.</p>.<p>ತಾಲ್ಲೂಕು ಕಸಾಪ ಹಾಗೂ ಶರಣ ಸಾಹಿತ್ಯ ಪರಿಷತ್ತುಗಳು ಸೋಮವಾರ ಇಲ್ಲಿಯ ಕ.ರಾ.ಬೆಲ್ಲದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಇಳೆ-ಮಳೆ' ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾರನಾಡಿದರು.</p>.<p>ಶ್ರೇಷ್ಟ ಸಾಹಿತ್ಯ ಜನಪದರ ಅಂಗಳದಲ್ಲಿ ಹುಟ್ಟುತ್ತದೆ. ಬರಿಗಣ್ಣಿನಿಂದ ಕಂಡದ್ದನ್ನು ಒಳಗಣ್ಣಿನಿಂದ ಆಸ್ವಾಧಿಸಿ ಅದ್ದನ್ನು ಅಕ್ಷರ ರೂಪಕ್ಕಿಳಿಸುವುದು ಸವಾಲಿನ ಕೆಲಸವಾಗಿದ್ದು, ಶ್ರೇಷ್ಟ ಕವಿಗಳು ಮಾತ್ರ ಅದನ್ನು ಸಾಧಿಸಬಲ್ಲರು ಎಂದು ಅಭಿಪ್ರಾಯಪಟ್ಟರು.</p>.<p>ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಓದು, ಬರಹ ಬಲ್ಲವರೆಲ್ಲ ಬರೆದ ಕವಿತೆಗಳು ಕವಿತೆಗಳಾಗಲಾರವು. ಭಾವನೆಗಳನ್ನು ಅಚ್ಚು ಕಟ್ಟಾಗಿ ಅಕ್ಷರ ರೂಪದಲ್ಲಿ ಸೆರೆ ಹಿಡಿದಾಗ ಮಾತ್ರ ಅದು ಉತ್ತಮ ಕಾವ್ಯವಾಗಬಲ್ಲದು ಎಂದು ತಿಳಿಸಿದರು.</p>.<p>ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ತಾಲ್ಲೂಕಿನ ಎಲ್ಲ ಸಾಹಿತ್ಯಾಸಕ್ತರ ನೆರವಿನಿಂದ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲು ಸಾದ್ಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.</p>.<p>ನಿಂಗು ಸೊಲಗಿ ಮಾತನಾಡಿದರು. ಹಿರಿಯ ಕವಿ ಶಂಕರ ಕುಕನೂರ ಅವರು ಕವಿಗೋಷ್ಠಿಯ ನೇತೃತ್ವ ವಹಿಸಿಕೊಂಡಿದ್ದರು. 16ಕವಿಗಳು 'ಇಳೆ-ಮಳೆ' ಕುರಿತು ಕವನ ವಾಚಿಸಿದರು.</p>.<p>ರಮೇಶಗೌಡ ಪಾಟೀಲ ಪ್ರಾರ್ಥಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು. ಎಂ.ಐ.ಮುಲ್ಲಾ ವಂದಿಸಿದರು.</p>.<p>ಸಿ.ಕೆ.ಗಣಪ್ಪನವರ, ಸುರೇಶ ಬಾವಿಹಳ್ಳಿ, ಕೃಷ್ಣಾ ಸಾವುಕಾರ, ಮಂಜುಳಾ ಇಟಗಿ, ಪಾಲಾಕ್ಷಿ ಗಣದಿನ್ನಿ, ಶೋಭಾ ಮೇಟಿ, ಎಂ.ಎನ್.ಶಿರನಹಳ್ಳಿ, ರವಿ ದೇವರೆಡ್ಡಿ, ಸಂತೋಷ ಮುರುಡಿ, ಗಿರಿಜಾ ಸೂಡಿ, ಕಳಕಪ್ಪ ಜಲ್ಲಿಗೇರಿ, ಕೊಟ್ರೇಶ ಜವಳಿ,ಮೊಹನ ಪಾಟೀಲ, ಈರಣ್ಣ ಸೊರಟೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>