ಈ ಕುರಿತು ತಹಶೀಲ್ದಾರ್ಗೆ ಮನವಿ ಪತ್ರ ಬರೆದಿರುವ ಅವರು ‘ಪ್ರವೇಶ ದ್ವಾರದ ಎದುರು ಟ್ರ್ಯಾಕ್ಟರ್, ರಂಟಿ, ಕುಂಟಿ ಇಡುವುದರಿಂದ ಬಸದಿ ಪ್ರವೇಶಿಸಲು ಭಕ್ತರಿಗೆ ತೊಂದರೆ ಆಗುತ್ತಿದೆ. ಅನಂತನಾಥ ಬಸದಿ ತನ್ನದೇ ಆದ ಇತಿಹಾಸ ಹೊಂದಿದ್ದು, ಪ್ರತಿದಿನ ಜೈನ ಸಮಾಜದ ನೂರಾರು ಭಕ್ತರು ಬಸದಿಗೆ ಬರುತ್ತಾರೆ. ಆದರೆ ಪ್ರವೇಶ ದ್ವಾರದ ಹತ್ತಿರ ಯಾವಾಗಲೂ ಗಲೀಜು ವಾತಾವರಣ ಇರುತ್ತದೆ. ಹೀಗಾಗಿ ಭಕ್ತರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.