‘ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ಧರ್ಮ ಕುರಿತ ಕಾನೂನುಬದ್ಧ ಅವಕಾಶದ ಸಂಗತಿಯನ್ನು ಬಸವನುಯಾಯಿಗಳು ಮನಗಾಣಿಸಿದ್ದೇವೇ ವಿನಾ ಅವರ ಮುಂದೆ ನಾವು ಯಾವುದೇ ಸಹಾಯಕ್ಕೆ ಕೈ ಚಾಚಿರಲಿಲ್ಲ. ಸಿದ್ದರಾಮಯ್ಯ ಮತ್ತು ಅಂದಿನ ಸಚಿವ ಸಂಪುಟ ಕೂಡ, ಕಾನೂನುಬದ್ಧವಾಗಿ ತಾವು ಮಾಡಬೇಕಾಗಿದ್ದ ಕೆಲಸವನ್ನು ಮಾಡಿದ್ದಾರೆ. ಈ ಇಡೀ ವಿದ್ಯಮಾನಕ್ಕೆ ಈಗ ವೋಟು ಗಳಿಕೆಯ ರಾಜಕಾರಣದ ಬಣ್ಣ ಬಳಿಯುವುದು ಬಸವ ತತ್ವಕ್ಕೆ ಮಾಡುವ ಬಹುದೊಡ್ಡ ಅಪಚಾರ’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.