<p><strong>ಗದಗ</strong>: ‘ಹನಿ ನೀರಾವರಿ, ಬೆಳೆಗಳಿಗೆ ಹನಿ ನೀರಿನೊಂದಿಗೆ ಪೋಷಕಾಂಶಗಳನ್ನೂ ನೀಡುವ ಫರ್ಟಿಗೇಷನ್ ಮತ್ತು ಡಿಜಿಟಲ್ ಫಾರ್ಮಿಂಗ್ನಂಥ ವಿಷಯಗಳಲ್ಲಿ ರೈತರಿಗೆ ಸೂಕ್ತ ತರಬೇತಿ ನೀಡುವುದು ಅತ್ಯವಶ್ಯಕ’ ಎಂದು ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಮರಡ್ಡಿ ಹೇಳಿದರು.</p>.<p>ಸಿಂಗಟಾಲೂರು ಏತ ನೀರಾವರಿ ಯೋಜನೆಯ 3ನೇ ಹಂತದ ಪ್ರದೇಶಗಳ ವ್ಯಾಪ್ತಿಗೆ ಬರುವ ರೈತರಿಗಾಗಿ ಯೋಜನಾ ಅನುಷ್ಠಾನ ಸಂಸ್ಥೆ ನೇಟಾಫಿಮ್ ಇಂಡಿಯಾ ತನ್ನ ಪ್ರಗತಿ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕಾಲಕಾಲಕ್ಕೆ ಮಣ್ಣಿನ ಫಲವತ್ತೆಯ ಪರೀಕ್ಷೆ ಮತ್ತು ಬೆಳೆಗಳಿಗೆ ಸೂಕ್ತ ಪೌಷ್ಠಿಕಾಂಶ ಒದಗಿಸುವ ಮೂಲಕ ಇಳವರಿ ಹೆಚ್ಚಿಸಬಹುದು. ನೇಟಾಫಿಮ್ ರೂಪಿಸಿರುವ ಪ್ರಗತಿ ಕಾರ್ಯಕ್ರಮವು ಎಸ್ಎಲ್ಐಎಸ್- 3 ಯೋಜನೆಯ ವ್ಯಾಪ್ತಿಗೆ ಬರುವ ರೈತರ ಸಬಲೀಕರಣದತ್ತ ದೃಢಹೆಜ್ಜೆಯಾಗಿದೆ. ಇಂಥ ಕಾರ್ಯಕ್ರಮಗಳು ಇಳುವರಿ ಹೆಚ್ಚಳ, ಸಂಪನ್ಮೂಲಗಳ ಕ್ಷಮತೆಯ ನಿರ್ವಹಣೆ ಮತ್ತು ಸುಸ್ಥಿರ ವಿಧಾನಗಳ ಅಳವಡಿಕೆಗೆ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.</p>.<p>ಪ್ರಗತಿಪರ ರೈತರು ಅನುಸರಿಸುತ್ತಿರುವ ಉತ್ತಮ ಕೃಷಿ ವಿಧಾನಗಳನ್ನು ಇತರರಿಗೆ ತಿಳಿಸುವ ಮತ್ತು ಹನಿ ನೀರಾವರಿ ವ್ಯವಸ್ಥೆಯಡಿ ಹೊಸ ವಿದ್ಯಮಾನಗಳ ತರಬೇತಿ ನೀಡುವ ಉದ್ದೇಶದೊಂದಿಗೆ ಪ್ರಗತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.</p>.<p>ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ್ ಜೋಗ್ಡಂಕರ್, ಎಂಇಐಎಲ್ನ ಜನರಲ್ ಮ್ಯಾನೇಜರ್ ಮೈಲಸಾಮಿ ಎಂ., ನೇಟಾಫಿಮ್ನ ಎಜಿಎಂಗಳಾದ ಗಿರೀಶ್ ದೇಶಪಾಂಡೆ ಮತ್ತು ಉಮೇಶ್ ಎಂ.ಸಿ. ಮಾತನಾಡಿದರು.</p>.<p>ಜೋಳ, ಸೂರ್ಯಕಾಂತಿ, ಹೆಸರು, ಈರುಳ್ಳಿ, ಮೆಣಸು, ಹೂವು ಇತ್ಯಾದಿ ಬೆಳೆಗಳನ್ನು ಬೆಳೆಯುವ ರೈತರು ಭಾಗವಹಿಸಿದ್ದರು. ಪ್ರತಿ ಬೆಳೆಯಲ್ಲಿಯೂ ಪೌಷ್ಟಿಕಾಂಶಯುಕ್ತ ಹನಿ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸುವ ಕುರಿತು ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ಹನಿ ನೀರಾವರಿ, ಬೆಳೆಗಳಿಗೆ ಹನಿ ನೀರಿನೊಂದಿಗೆ ಪೋಷಕಾಂಶಗಳನ್ನೂ ನೀಡುವ ಫರ್ಟಿಗೇಷನ್ ಮತ್ತು ಡಿಜಿಟಲ್ ಫಾರ್ಮಿಂಗ್ನಂಥ ವಿಷಯಗಳಲ್ಲಿ ರೈತರಿಗೆ ಸೂಕ್ತ ತರಬೇತಿ ನೀಡುವುದು ಅತ್ಯವಶ್ಯಕ’ ಎಂದು ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಮರಡ್ಡಿ ಹೇಳಿದರು.</p>.<p>ಸಿಂಗಟಾಲೂರು ಏತ ನೀರಾವರಿ ಯೋಜನೆಯ 3ನೇ ಹಂತದ ಪ್ರದೇಶಗಳ ವ್ಯಾಪ್ತಿಗೆ ಬರುವ ರೈತರಿಗಾಗಿ ಯೋಜನಾ ಅನುಷ್ಠಾನ ಸಂಸ್ಥೆ ನೇಟಾಫಿಮ್ ಇಂಡಿಯಾ ತನ್ನ ಪ್ರಗತಿ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕಾಲಕಾಲಕ್ಕೆ ಮಣ್ಣಿನ ಫಲವತ್ತೆಯ ಪರೀಕ್ಷೆ ಮತ್ತು ಬೆಳೆಗಳಿಗೆ ಸೂಕ್ತ ಪೌಷ್ಠಿಕಾಂಶ ಒದಗಿಸುವ ಮೂಲಕ ಇಳವರಿ ಹೆಚ್ಚಿಸಬಹುದು. ನೇಟಾಫಿಮ್ ರೂಪಿಸಿರುವ ಪ್ರಗತಿ ಕಾರ್ಯಕ್ರಮವು ಎಸ್ಎಲ್ಐಎಸ್- 3 ಯೋಜನೆಯ ವ್ಯಾಪ್ತಿಗೆ ಬರುವ ರೈತರ ಸಬಲೀಕರಣದತ್ತ ದೃಢಹೆಜ್ಜೆಯಾಗಿದೆ. ಇಂಥ ಕಾರ್ಯಕ್ರಮಗಳು ಇಳುವರಿ ಹೆಚ್ಚಳ, ಸಂಪನ್ಮೂಲಗಳ ಕ್ಷಮತೆಯ ನಿರ್ವಹಣೆ ಮತ್ತು ಸುಸ್ಥಿರ ವಿಧಾನಗಳ ಅಳವಡಿಕೆಗೆ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.</p>.<p>ಪ್ರಗತಿಪರ ರೈತರು ಅನುಸರಿಸುತ್ತಿರುವ ಉತ್ತಮ ಕೃಷಿ ವಿಧಾನಗಳನ್ನು ಇತರರಿಗೆ ತಿಳಿಸುವ ಮತ್ತು ಹನಿ ನೀರಾವರಿ ವ್ಯವಸ್ಥೆಯಡಿ ಹೊಸ ವಿದ್ಯಮಾನಗಳ ತರಬೇತಿ ನೀಡುವ ಉದ್ದೇಶದೊಂದಿಗೆ ಪ್ರಗತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.</p>.<p>ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ್ ಜೋಗ್ಡಂಕರ್, ಎಂಇಐಎಲ್ನ ಜನರಲ್ ಮ್ಯಾನೇಜರ್ ಮೈಲಸಾಮಿ ಎಂ., ನೇಟಾಫಿಮ್ನ ಎಜಿಎಂಗಳಾದ ಗಿರೀಶ್ ದೇಶಪಾಂಡೆ ಮತ್ತು ಉಮೇಶ್ ಎಂ.ಸಿ. ಮಾತನಾಡಿದರು.</p>.<p>ಜೋಳ, ಸೂರ್ಯಕಾಂತಿ, ಹೆಸರು, ಈರುಳ್ಳಿ, ಮೆಣಸು, ಹೂವು ಇತ್ಯಾದಿ ಬೆಳೆಗಳನ್ನು ಬೆಳೆಯುವ ರೈತರು ಭಾಗವಹಿಸಿದ್ದರು. ಪ್ರತಿ ಬೆಳೆಯಲ್ಲಿಯೂ ಪೌಷ್ಟಿಕಾಂಶಯುಕ್ತ ಹನಿ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸುವ ಕುರಿತು ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>