26 ಕೆರೆ ತುಂಬಿಸಲು 1 ಟಿಎಂಸಿ ನೀರು
ನರಗುಂದ ತಾಲ್ಲೂಕಿನ 26 ಕೆರೆ ತುಂಬಿಸಲು 1 ಟಿಎಂಸಿ ನೀರು ಹರಿಸಲಾಗಿದೆ. ಜಮೀನುಗಳಲ್ಲಿ ಬೆಳೆ ಇಲ್ಲದ್ದರಿಂದ ಕಾಲುವೆ ಭರ್ತಿಯಾಗಿ ಕೆರೆಗಳತ್ತ ನೀರು ಹರಿದು ಬರುತ್ತಿದೆ. ಈಗಾಗಲೇ ಶಿರೋಳದ ಕೆರೆಗೆ ನೀರು ಹರಿದು ಬಂದಿದೆ. ಮೇ 14ರಿಂದ 24ರವರೆಗೆ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಿನ ನೀರಿನ ಲಭ್ಯತೆ ಅರಿತು ತಾವೇ ಜವಾಬ್ದಾರಿಯಿಂದ ಕೆರೆಗೆ ನೀರು ತುಂಬಿಸಬೇಕಿದೆ. ಈಗಾಗಲೇ ನವಿಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಸಂಪೂರ್ಣ ಕಡಿಮೆಯಾಗಿದೆ. ಮುಂದೆ ಮಳೆಯಾದಾಗ ಮಾತ್ರ ಮತ್ತೇ ನೀರು ದೊರೆಯಲು ಸಾಧ್ಯ.