ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ನರಸಪ್ಪನ ಗುಡ್ಡದ ಬಳಿ ಕರಡಿ ಪ್ರತ್ಯಕ್ಷ

Last Updated 31 ಮಾರ್ಚ್ 2021, 3:56 IST
ಅಕ್ಷರ ಗಾತ್ರ

ಅರಸೀಕೆರೆ (ಉಚ್ಚಂಗಿದುರ್ಗ): ಗ್ರಾಮದ ಹೊರವಲಯದ ನರಸಪ್ಪನ ಗುಡ್ಡದ ಬಳಿ ಸೋಮವಾರ ಸಂಜೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಕಾರ್ಮಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರವನ್ನು ಸೆರೆಹಿಡಿದಿದ್ದು ಹರಿಯಬಿಟ್ಟಿದ್ದಾರೆ.

ತಿಮಲಾಪುರದ ರೈತ ಮಂಜುನಾಥ್ ಜಮೀನಿನಲ್ಲಿ ನೀರು ಕಟ್ಟುತ್ತಿರುವ ವೇಳೆ ಹಿಂಬದಿಯಲ್ಲಿ ಕರಡಿ ಹೋಗಿದೆ. ಕ್ರಷರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಇದನ್ನು ಗಮನಿಸಿ ಎಚ್ಚೆತ್ತುಕೊಂಡ ಕಾರ್ಮಿಕರು ರೈತನ್ನು ಕೂಗಿ ಕರಡಿ ಬರುತ್ತಿರುವುದನ್ನು ತಿಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ರೈತ ಮಂಜುನಾಥ್ ಕಾರ್ಮಿಕರ ಕಡೆ ಓಡಿ ಬಂದು ಆತಂಕದಿಂದ ಪಾರಾಗಿದ್ದಾರೆ.

‘ಕಾರ್ಮಿಕರು ಕೂಗಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಆದರೂ ಆತಂಕದಿಂದ ಓಡಿ ಬಂದೆ. ಕಾರ್ಮಿಕರ ಸಹಾಯದಿಂದ ಅನಾಹುತ ತಪ್ಪಿದಂತಾಗಿದೆ' ಎಂದು ರೈತ ಮಂಜುನಾಥ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT