<p><strong>ಅರಸೀಕೆರೆ: </strong>ಅರಸೀಕೆರೆ ಚಗಚಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಯರಗನಾಳು ಗ್ರಾಮದ ಯುವ ರೈತರೊಬ್ಬರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಇತರ ರೈತರಿಗೆ ಮಾದರಿಯಾಗಿದ್ದಾರೆ.</p><p>ಗ್ರಾಮದ ಚಂದ್ರಣ್ಣ ತಮ್ಮ 8 ಎಕರೆ ಜಮೀನಿನಲ್ಲಿ ವ್ಯವಸಾಯ, ಮೀನುಗಾರಿಕೆ, ಜೇನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಬಿ.ಎ. ಪದವೀಧರರಾದ ಇವರು, ಪದವಿ ನಂತರ ಕಂಪ್ಯೂಟರ್ ಮೆಕ್ಯಾನಿಸ್ಟ್ ಎಂಬ 6 ತಿಂಗಳ ಕೋರ್ಸ್ ಮಾಡಿದರು. 2000 ನೇ ಇಸವಿಯಲ್ಲಿ ಮುಂಬೈಗೆ ಹೋಗಿ ಕೆಲಸಕ್ಕೆ ಸೇರಿದರು. ಕೌಟುಂಬಿಕ ಸಮಸ್ಯೆಗಳ ಕಾರಣ 2010ರಲ್ಲಿ ಸ್ವಗ್ರಾಮಕ್ಕೆ ಮರಳಿದರು. ಗಂಡಸಿ ಹ್ಯಾಂಡ್ ಪೋಸ್ಟ್ನಲ್ಲಿ ಎಸ್. ಕೆ. ಕಂಪ್ಯೂಟರ್ಸ್ ಆರಂಭಿಸಿದರು. 8 ವರ್ಷಗಳ ಇದರಲ್ಲೇ ಜೀವನ ಸಾಗಿಸಿದರು.</p><p>ಕೋವಿಡ್–19 ಕಂಪ್ಯೂಟರ್ಸ್ ಸಂಸ್ಥೆಯನ್ನು ಮುಚ್ಚಬೇಕಾಯಿತು. ಅಂದು ಕೃಷಿಯನ್ನು ಶುರು ಮಾಡಿದ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಹೊಸದಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ವ್ಯವಸಾಯದ ಜೊತೆಗೆ ಮೀನುಗಾರಿಕೆ ಮತ್ತು ಜೇನು ಸಾಕಣೆ ಆರಂಭಿಸಿದರು.</p><p>ಸುಮಾರು 70 X 70 ಅಡಿ ನೀರಿನ ಹೊಂಡದಲ್ಲಿ ರಾಹು, ಕಾಟ್ಲಾ, ಮ್ರಿಗಾಲ್, ಕಾಮನ್ ಕಾರ್ಪ್ ಇತ್ಯಾದಿ ಬೇಡಿಕೆ ಇರುವ ಮೀನುಗಳ ಸಾಕಾಣೆ ಮಾಡುತ್ತಿದ್ದಾರೆ. 3 ಸಾವಿರ ಮೀನಿನ ಮರಿಗಳನ್ನು ಹೊಂಡದಲ್ಲಿ ಸಾಕಿದ್ದು, ವರ್ಷಕ್ಕೆ ₹ 1 ಲಕ್ಷದಿಂದ ₹1.5 ಲಕ್ಷ ಆದಾಯ ಪಡೆಯುತ್ತಿದ್ದಾರೆ.</p><p>ಇದರ ಜೊತೆಗೆ ಕೋಳಿ ಸಾಕಾಣಿಕೆ ಮಾಡುತ್ತಿದ್ದು, 40 ಕಡಕ್ ನಾಥ್ ಕೋಳಿಗಳನ್ನು ಸಾಕಿದ್ದಾರೆ. 4 ಎಕರೆ ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಬೆಳೆಯುತ್ತಿದ್ದು, ಉಳಿದ 4 ಎಕರೆಯಲ್ಲಿ ಜೋಳ, ರಾಗಿ, ಆಲುಡ್ಡೆ, ಶುಂಠಿ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಚಂದ್ರಣ್ಣ, ಜೀವಾಮೃತ, ಬೀಜಾಮೃತ, ಪಂಚಗವ್ಯಗಳಂತಹ ದ್ರವರೂಪದ ಸಾವಯವ ಗೊಬ್ಬರಗಳನ್ನು ತಯಾರಿಸಿ ತಮ್ಮ ಬೆಳೆಗಳಿಗೆ ಉಪಯೋಗಿಸುತ್ತಾರೆ.</p><p>ಪದವಿ ಮುಗಿಸಿ ಕೃಷಿಯಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿರುವ ಚಂದ್ರಣ್ಣ, ಕೃಷಿಯಿಂದ ವಾರ್ಷಿಕ ₹5 ಲಕ್ಷ ಆದಾಯ ಪಡೆಯುತ್ತಿದ್ದಾರೆ.</p><p><strong>ಇಳುವರಿ ಹೆಚ್ಚಿಸುವ ಜೇನು ಕೃಷಿ</strong></p><p>ಜೈನು ಕೃಷಿಯಲ್ಲೂ ಆಸಕ್ತಿ ಹೊಂದಿರುವ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಮಾಹಿತಿ ಪಡೆದರು. ಸುತ್ತಮುತ್ತಲಿನ ರೈತರಿಂದ ಹುಡುಕಿ ಜೇನು ಪೆಟ್ಟಿಗೆಗಳನ್ನು ತಂದು ಜೇನು ಸಾಕಾಣಿಕೆ ಪ್ರಾರಂಭಿಸಿದರು. ಅನೇಕ ಸಮಸ್ಯೆಗಳನ್ನು ಎದುರಿಸಿದರೂ, ಅವುಗಳಿಗೆ ಪರಿಹಾರ ಕಂಡುಕೊಂಡು ಯಶಸ್ವಿಯಾಗಿದ್ದಾರೆ.</p><p>ಪ್ರಸ್ತುತ 12 ಜೇನುಪೆಟ್ಟಿಗೆಗಳಲ್ಲಿ ಜೇನು ಸಾಕುತ್ತಿದ್ದು, ಇದರ ಸಂಖ್ಯೆಯನ್ನು ನೂರಕ್ಕೆ ಏರಿಸುವುದು ಇವರ ಗುರಿ. ಪ್ರತಿ ವರ್ಷ ಒಂದು ಪೆಟ್ಟಿಗೆಯಿಂದ ಸುಮಾರು 5 ಕೆ ಜಿ ಜೇನುತುಪ್ಪವನ್ನು ತೆಗೆಯುತ್ತಿದ್ದಾರೆ. ಮಾರಾಟಕ್ಕಾಗಿ ಅಕ್ಷಯಕಲ್ಪ ಕಂಪನಿಯನ್ನು ಆಶ್ರಯಿಸಿದ್ದಾರೆ. ಹೈನುಗಾರಿಕೆ ಕೂಡ ಮಾಡುತ್ತಿರುವ ಇವರು, 5 ಹಸುಗಳನ್ನು ಹೊಂದಿದ್ದು, ದಿನಕ್ಕೆ 40 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ: </strong>ಅರಸೀಕೆರೆ ಚಗಚಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಯರಗನಾಳು ಗ್ರಾಮದ ಯುವ ರೈತರೊಬ್ಬರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಇತರ ರೈತರಿಗೆ ಮಾದರಿಯಾಗಿದ್ದಾರೆ.</p><p>ಗ್ರಾಮದ ಚಂದ್ರಣ್ಣ ತಮ್ಮ 8 ಎಕರೆ ಜಮೀನಿನಲ್ಲಿ ವ್ಯವಸಾಯ, ಮೀನುಗಾರಿಕೆ, ಜೇನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಬಿ.ಎ. ಪದವೀಧರರಾದ ಇವರು, ಪದವಿ ನಂತರ ಕಂಪ್ಯೂಟರ್ ಮೆಕ್ಯಾನಿಸ್ಟ್ ಎಂಬ 6 ತಿಂಗಳ ಕೋರ್ಸ್ ಮಾಡಿದರು. 2000 ನೇ ಇಸವಿಯಲ್ಲಿ ಮುಂಬೈಗೆ ಹೋಗಿ ಕೆಲಸಕ್ಕೆ ಸೇರಿದರು. ಕೌಟುಂಬಿಕ ಸಮಸ್ಯೆಗಳ ಕಾರಣ 2010ರಲ್ಲಿ ಸ್ವಗ್ರಾಮಕ್ಕೆ ಮರಳಿದರು. ಗಂಡಸಿ ಹ್ಯಾಂಡ್ ಪೋಸ್ಟ್ನಲ್ಲಿ ಎಸ್. ಕೆ. ಕಂಪ್ಯೂಟರ್ಸ್ ಆರಂಭಿಸಿದರು. 8 ವರ್ಷಗಳ ಇದರಲ್ಲೇ ಜೀವನ ಸಾಗಿಸಿದರು.</p><p>ಕೋವಿಡ್–19 ಕಂಪ್ಯೂಟರ್ಸ್ ಸಂಸ್ಥೆಯನ್ನು ಮುಚ್ಚಬೇಕಾಯಿತು. ಅಂದು ಕೃಷಿಯನ್ನು ಶುರು ಮಾಡಿದ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಹೊಸದಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ವ್ಯವಸಾಯದ ಜೊತೆಗೆ ಮೀನುಗಾರಿಕೆ ಮತ್ತು ಜೇನು ಸಾಕಣೆ ಆರಂಭಿಸಿದರು.</p><p>ಸುಮಾರು 70 X 70 ಅಡಿ ನೀರಿನ ಹೊಂಡದಲ್ಲಿ ರಾಹು, ಕಾಟ್ಲಾ, ಮ್ರಿಗಾಲ್, ಕಾಮನ್ ಕಾರ್ಪ್ ಇತ್ಯಾದಿ ಬೇಡಿಕೆ ಇರುವ ಮೀನುಗಳ ಸಾಕಾಣೆ ಮಾಡುತ್ತಿದ್ದಾರೆ. 3 ಸಾವಿರ ಮೀನಿನ ಮರಿಗಳನ್ನು ಹೊಂಡದಲ್ಲಿ ಸಾಕಿದ್ದು, ವರ್ಷಕ್ಕೆ ₹ 1 ಲಕ್ಷದಿಂದ ₹1.5 ಲಕ್ಷ ಆದಾಯ ಪಡೆಯುತ್ತಿದ್ದಾರೆ.</p><p>ಇದರ ಜೊತೆಗೆ ಕೋಳಿ ಸಾಕಾಣಿಕೆ ಮಾಡುತ್ತಿದ್ದು, 40 ಕಡಕ್ ನಾಥ್ ಕೋಳಿಗಳನ್ನು ಸಾಕಿದ್ದಾರೆ. 4 ಎಕರೆ ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಬೆಳೆಯುತ್ತಿದ್ದು, ಉಳಿದ 4 ಎಕರೆಯಲ್ಲಿ ಜೋಳ, ರಾಗಿ, ಆಲುಡ್ಡೆ, ಶುಂಠಿ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಚಂದ್ರಣ್ಣ, ಜೀವಾಮೃತ, ಬೀಜಾಮೃತ, ಪಂಚಗವ್ಯಗಳಂತಹ ದ್ರವರೂಪದ ಸಾವಯವ ಗೊಬ್ಬರಗಳನ್ನು ತಯಾರಿಸಿ ತಮ್ಮ ಬೆಳೆಗಳಿಗೆ ಉಪಯೋಗಿಸುತ್ತಾರೆ.</p><p>ಪದವಿ ಮುಗಿಸಿ ಕೃಷಿಯಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿರುವ ಚಂದ್ರಣ್ಣ, ಕೃಷಿಯಿಂದ ವಾರ್ಷಿಕ ₹5 ಲಕ್ಷ ಆದಾಯ ಪಡೆಯುತ್ತಿದ್ದಾರೆ.</p><p><strong>ಇಳುವರಿ ಹೆಚ್ಚಿಸುವ ಜೇನು ಕೃಷಿ</strong></p><p>ಜೈನು ಕೃಷಿಯಲ್ಲೂ ಆಸಕ್ತಿ ಹೊಂದಿರುವ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಮಾಹಿತಿ ಪಡೆದರು. ಸುತ್ತಮುತ್ತಲಿನ ರೈತರಿಂದ ಹುಡುಕಿ ಜೇನು ಪೆಟ್ಟಿಗೆಗಳನ್ನು ತಂದು ಜೇನು ಸಾಕಾಣಿಕೆ ಪ್ರಾರಂಭಿಸಿದರು. ಅನೇಕ ಸಮಸ್ಯೆಗಳನ್ನು ಎದುರಿಸಿದರೂ, ಅವುಗಳಿಗೆ ಪರಿಹಾರ ಕಂಡುಕೊಂಡು ಯಶಸ್ವಿಯಾಗಿದ್ದಾರೆ.</p><p>ಪ್ರಸ್ತುತ 12 ಜೇನುಪೆಟ್ಟಿಗೆಗಳಲ್ಲಿ ಜೇನು ಸಾಕುತ್ತಿದ್ದು, ಇದರ ಸಂಖ್ಯೆಯನ್ನು ನೂರಕ್ಕೆ ಏರಿಸುವುದು ಇವರ ಗುರಿ. ಪ್ರತಿ ವರ್ಷ ಒಂದು ಪೆಟ್ಟಿಗೆಯಿಂದ ಸುಮಾರು 5 ಕೆ ಜಿ ಜೇನುತುಪ್ಪವನ್ನು ತೆಗೆಯುತ್ತಿದ್ದಾರೆ. ಮಾರಾಟಕ್ಕಾಗಿ ಅಕ್ಷಯಕಲ್ಪ ಕಂಪನಿಯನ್ನು ಆಶ್ರಯಿಸಿದ್ದಾರೆ. ಹೈನುಗಾರಿಕೆ ಕೂಡ ಮಾಡುತ್ತಿರುವ ಇವರು, 5 ಹಸುಗಳನ್ನು ಹೊಂದಿದ್ದು, ದಿನಕ್ಕೆ 40 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>