<p><strong>ಆಲೂರು</strong>: ತಾಲ್ಲೂಕಿನಾದ್ಯಂತ ಯಥೇಚ್ಛವಾಗಿ ಮುಸುಕಿನ ಜೋಳದ ಏಕಬೆಳೆ ಪದ್ಧತಿಯಿಂದಾಗಿ, ಕೇದಿಗೆ ರೋಗ ಶೀಲೀಂಧ್ರ ರೋಗ ಹೆಚ್ಚಾಗುವ ಸಂಭವವಿರುತ್ತದೆ. ಈ ರೋಗ ತಗುಲಿದರೆ ಶೇ 50ಕ್ಕಿಂತ ಹೆಚ್ಚು ಇಳುವರಿ ನಷ್ಟ ಉಂಟಾಗುತ್ತದೆ ಹಾಗೂ ಬೆಳೆ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದ್ದಾರೆ. <br><br> ಎಲೆಗಳ ಮೇಲ್ಮೈಯಲ್ಲಿ ಮತ್ತು ಎಲೆಗಳ ತೊಟ್ಟುಗಳಲ್ಲಿ ಹಳದಿ, ತೆಳು ಹಳದಿ ಕಲೆ–ಗೆರೆಗಳು, ಎಲೆಗಳ ಕೆಳಭಾಗದಲ್ಲಿ ಬೂದು-ಬಿಳಿ ಬಣ್ಣದ ಶಿಲೀಂಧ್ರ ಬೆಳೆವಣಿಗೆ ರೋಗದ ಲಕ್ಷಣವಾಗಿದೆ. ಇದರಿಂದ ಮುಸುಕಿನ ಜೋಳದ ಬೆಳವಣಿಗೆ ಕುಂಠಿತ, ಅಕಾಲಿಕ ಹಳದಿ ಎಲೆಗಳ ಉದುರುವಿಕೆ, ಬಾಡುವಿಕೆ ಮತ್ತು ಮುಸಿಕಿನ ಜೋಳದ ತೆನೆ–ಕಾಳುಗಳ ಗಾತ್ರದಲ್ಲಿ ಇಳಿಮುಖವಾಗುತ್ತದೆ ಎಂದು ಹೇಳಿದರು. </p>.<p>ಅಂತರ ಬೆಳೆ ಪದ್ಧತಿ ಹಾಗೂ ಬೆಳೆ ಪರಿವರ್ತನೆ ಕ್ರಮ ಅನುಸರಿಸದೆ ಇರುವುದರಿಂದ ತಂಪಾದ ವಾತಾವರಣ ಮತ್ತು ತೇವಾಂಶಯುಕ್ತ ಗಾಳಿ ವಾತಾವರಣದಲ್ಲಿ ಈ ರೋಗವು ಉಲ್ಬಣವಾಗುತ್ತದೆ. ರೋಗ ನಿರ್ವಹಣೆಗಾಗಿ ಬಿತ್ತನೆಗೆ ಬಳಸುವ ಬೀಜಗಳನ್ನು ಮೆಟಲಾಕ್ಸಿಲ್–ಒ ಶೇ4, ಶೀಲೀಂದ್ರ ನಾಶಕಕ್ಕೆ ಪ್ರತಿ ಕೆ.ಜಿ.ಗೆ 5 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಎಂದರು.</p>.<p>ಶೀಲೀಂಧ್ರ ನಾಶಕವಾದ ಮೇಟಲಾ ಮೆಟಲಾಕ್ಸಿಲ್–ಒ ಶೇ4 ಹಾಗೂ ಮ್ಯಾಂಕೋಜೆಬ್ ಶೇ65 ಅನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂನಂತೆ ಬಿತ್ತನೆಯಾದ 24 ದಿನಗಳ ನಂತರ ಬೆಳೆಗಳಿಗೆ ಸಿಂಪಡಿಸುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು.</p>.<p>ಪ್ರಸ್ತುತ 2025–26ನೇ ಸಾಲಿನಲ್ಲಿ ಆಲೂರು ತಾಲ್ಲೂಕಿನಾದ್ಯಂತ 11,000 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯ ಗುರಿಯಾಗಿದ್ದು, ಈಗಾಗಲೇ 5,550 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯಾಗಿರುತ್ತದೆ ಎಂದು ರಮೇಶ್ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು</strong>: ತಾಲ್ಲೂಕಿನಾದ್ಯಂತ ಯಥೇಚ್ಛವಾಗಿ ಮುಸುಕಿನ ಜೋಳದ ಏಕಬೆಳೆ ಪದ್ಧತಿಯಿಂದಾಗಿ, ಕೇದಿಗೆ ರೋಗ ಶೀಲೀಂಧ್ರ ರೋಗ ಹೆಚ್ಚಾಗುವ ಸಂಭವವಿರುತ್ತದೆ. ಈ ರೋಗ ತಗುಲಿದರೆ ಶೇ 50ಕ್ಕಿಂತ ಹೆಚ್ಚು ಇಳುವರಿ ನಷ್ಟ ಉಂಟಾಗುತ್ತದೆ ಹಾಗೂ ಬೆಳೆ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದ್ದಾರೆ. <br><br> ಎಲೆಗಳ ಮೇಲ್ಮೈಯಲ್ಲಿ ಮತ್ತು ಎಲೆಗಳ ತೊಟ್ಟುಗಳಲ್ಲಿ ಹಳದಿ, ತೆಳು ಹಳದಿ ಕಲೆ–ಗೆರೆಗಳು, ಎಲೆಗಳ ಕೆಳಭಾಗದಲ್ಲಿ ಬೂದು-ಬಿಳಿ ಬಣ್ಣದ ಶಿಲೀಂಧ್ರ ಬೆಳೆವಣಿಗೆ ರೋಗದ ಲಕ್ಷಣವಾಗಿದೆ. ಇದರಿಂದ ಮುಸುಕಿನ ಜೋಳದ ಬೆಳವಣಿಗೆ ಕುಂಠಿತ, ಅಕಾಲಿಕ ಹಳದಿ ಎಲೆಗಳ ಉದುರುವಿಕೆ, ಬಾಡುವಿಕೆ ಮತ್ತು ಮುಸಿಕಿನ ಜೋಳದ ತೆನೆ–ಕಾಳುಗಳ ಗಾತ್ರದಲ್ಲಿ ಇಳಿಮುಖವಾಗುತ್ತದೆ ಎಂದು ಹೇಳಿದರು. </p>.<p>ಅಂತರ ಬೆಳೆ ಪದ್ಧತಿ ಹಾಗೂ ಬೆಳೆ ಪರಿವರ್ತನೆ ಕ್ರಮ ಅನುಸರಿಸದೆ ಇರುವುದರಿಂದ ತಂಪಾದ ವಾತಾವರಣ ಮತ್ತು ತೇವಾಂಶಯುಕ್ತ ಗಾಳಿ ವಾತಾವರಣದಲ್ಲಿ ಈ ರೋಗವು ಉಲ್ಬಣವಾಗುತ್ತದೆ. ರೋಗ ನಿರ್ವಹಣೆಗಾಗಿ ಬಿತ್ತನೆಗೆ ಬಳಸುವ ಬೀಜಗಳನ್ನು ಮೆಟಲಾಕ್ಸಿಲ್–ಒ ಶೇ4, ಶೀಲೀಂದ್ರ ನಾಶಕಕ್ಕೆ ಪ್ರತಿ ಕೆ.ಜಿ.ಗೆ 5 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಎಂದರು.</p>.<p>ಶೀಲೀಂಧ್ರ ನಾಶಕವಾದ ಮೇಟಲಾ ಮೆಟಲಾಕ್ಸಿಲ್–ಒ ಶೇ4 ಹಾಗೂ ಮ್ಯಾಂಕೋಜೆಬ್ ಶೇ65 ಅನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂನಂತೆ ಬಿತ್ತನೆಯಾದ 24 ದಿನಗಳ ನಂತರ ಬೆಳೆಗಳಿಗೆ ಸಿಂಪಡಿಸುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು.</p>.<p>ಪ್ರಸ್ತುತ 2025–26ನೇ ಸಾಲಿನಲ್ಲಿ ಆಲೂರು ತಾಲ್ಲೂಕಿನಾದ್ಯಂತ 11,000 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯ ಗುರಿಯಾಗಿದ್ದು, ಈಗಾಗಲೇ 5,550 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯಾಗಿರುತ್ತದೆ ಎಂದು ರಮೇಶ್ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>