‘ಮಂಜು ಅನುಮತಿ ಇಲ್ಲದೆ ಮಗನಿಗೆ ಟಿಕೆಟ್ ಕೊಡುವಷ್ಟು ದಡ್ಡರು ಕಾಂಗ್ರೆಸ್ನಲ್ಲಿಲ್ಲ. ಆದರೆ, ಅವರಿಗೆ ಬಿಜೆಪಿಯೂ ಬೇಕು, ಕಾಂಗ್ರೆಸ್ ಕೂಡ ಬೇಕು. ಬಿಜೆಪಿ ಬಗ್ಗೆ ನಿಷ್ಠೆ ಇದ್ದರೆ ದ್ವಂದ್ವ ನಿಲುವು ಬಿಟ್ಟು ಮಡಿಕೇರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿ’ ಎಂದು ಸವಾಲು ಹಾಕಿದರು.
ಕುಟುಂಬ ರಾಜಕಾರಣ ಇಂದು ಸರ್ವ ವ್ಯಾಪಿಯಾಗಿದೆ. ಇದಕ್ಕೆ ಜನರೇ ಮನ್ನಣೆ ನೀಡಿದ್ದಾರೆ. ಹೀಗಾಗಿ ಆ ಚರ್ಚೆ ಈಗ ಅಪ್ರಸ್ತುತ ಎಂದ ಅವರು, ಎಲ್ಲಾ ಪಕ್ಷಗಳವರು ಕೇವಲ ಟೀಕೆ ಟಿಪ್ಪಣಿಯಲ್ಲೇ ತೊಡಗುವುದನ್ನು ಬಿಟ್ಟು ಜಿಲ್ಲೆಯ ಮೂಲಭೂತ ಸಮಸ್ಯೆಗಳಾದ ಕಾಡಾನೆ ಸಮಸ್ಯೆ, ನೀರಾವರಿ,ಬೆಳೆ ಹಾನಿ ಬಗ್ಗೆ ದನಿ ಎತ್ತಲಿ, ತಮ್ಮ ಭವಿಷ್ಯ ಕಾರ್ಯಕ್ರಮ ಏನೆಂದು ಹೇಳಲಿ ಎಂದು ಒತ್ತಾಯಿಸಿದರು.