ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಬಳಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿದ್ದ ಕೆರೆ ಒಡೆದಿದೆ.
ಚತುಷ್ಪಥಕ್ಕಾಗಿ ಗುತ್ತಿಗೆದಾರ ಕಂಪನಿ, ಹೆದ್ದಾರಿಯ ತಳಭಾಗದಲ್ಲಿ ನೀರು ಹರಿಯಲು ಪೈಪ್ ಹಾಕದೆ ಅವೈಜ್ಞಾನಿಕ ವಾಗಿ ಹಾಕಿದ್ದ ಸಾವಿರಾರು ಲಾರಿ ಲೋಡ್ ಮಣ್ಣಿನಿಂದ ಕೆರೆ ನಿರ್ಮಾಣವಾಗಿತ್ತು.
ಇದೀಗ ಮಳೆ ಹೆಚ್ಚಾಗಿದ್ದರಿಂದ ದೊಡ್ಡ ಕೆರೆ ಗುರುವಾರ ಮುಂಜಾನೆ ಒಡೆದಿದೆ. ಸುಮಾರು 50 ಎಕರೆ ಕೃಷಿ ಭೂಮಿಯಲ್ಲಿ ಇದ್ದ ಕಾಫಿ, ಭತ್ತ, ಅಡಿಕೆ ಮರಗಿಡಗಳು ಸಂಪೂರ್ಣ ಹಾನಿಗೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.