ಘಟನೆ ವಿವರ: ಕಾಳಮ್ಮ ಅವರು ತಿಪಟೂರು ತಾಲ್ಲೂಕಿನ ಮಡೆನೂರಿಗೆ ಮದುವೆಗೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗೇಟ್ ಬಳಿ ವಾಹನಕ್ಕಾಗಿ ಕಾಯುತ್ತಿದ್ದರು. ಕಾದು ಬಹಳ ಹೊತ್ತಾದರೂ ಯಾವುದೇ ವಾಹನ ಬರಲಿಲ್ಲ. ಆ ವೇಳೆಗೆ ಬಂದ ಬೈಕ್ ಸವಾರರಲ್ಲಿ ಡ್ರಾಪ್ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಸವಾರರು ಮಾರ್ಗ ಮಧ್ಯೆ ಇರುವ ಅರಣ್ಯ ಪ್ರದೇಶ ದೊಳಗೆ ಕಾಳಮ್ಮ ಅವರನ್ನು ಬಲ ವಂತವಾಗಿ ಕರೆದೊಯ್ದು ಸರ ಕಿತ್ತು ಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.