ಅರಸೀಕೆರೆ: ತಾಲ್ಲೂಕಿನ ಚಲ್ಲಾಪುರ ಗ್ರಾಮದ ಚಿತ್ರಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವವು ಫೆ.21 ರಿಂದ 23 ರವರೆಗೆ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ ಮತ್ತು ಗಂಗಾಪೂಜೆ, ಗೋಪೂಜೆ, ಪುರಪ್ರವೇಶ. ಬಳಿಕ ಗಣಪತಿ ಪೂಜೆ, ಪಂಚ ಕಳಸ ಸ್ಥಾಪನೆ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ ನಡೆಯಲಿದೆ.
ಫೆ.22 ರಂದು ಬೆಳಿಗ್ಗೆ ಹಾರನಹಳ್ಳಿ ಓಬಳೇಶ್ವರ ಸ್ವಾಮಿ ಹಾಗೂ ಚಲ್ಲಾಪುರದ ದೂತರಾಯಸ್ವಾಮಿ ನೇತೃತ್ವದಲ್ಲಿ ನೂತನ ದೇವಾಲಯದ ಕಳಸಾರೋಹಣ. ಬಳಿಕ ಚಿತ್ರಲಿಂಗೇಶ್ವರ ಸ್ವಾಮಿ ದೇವರಿಗೆ ಮಹಾಮಂಗಳಾರತಿ.
ಬೆಳಿಗ್ಗೆ 11ಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 8ಕ್ಕೆ ಚಿತ್ರಲಿಂಗೇಶ್ವರ ಸ್ವಾಮಿಯ ‘ನಡೆಮುಡಿ’ ಮಹೋತ್ಸವ, ರಾತ್ರಿ 9.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಫೆ.23 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಸ್ವಾಮಿಯವರ ‘ಕೆಂಡ ಸೇವೆ’ ಬಳಿಕ ದೂತರಾಯಸ್ವಾಮಿ ಹಾಗೂ ಕರಿಯಮ್ಮ ದೇವಿಯವರ ಮಣೇವು ಕಾರ್ಯಕ್ರಮ. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಚಲ್ಲಾಪುರದ ಚಿತ್ರಲಿಂಗೇಶ್ವರ ಸ್ವಾಮಿ ಯುವಕ ಸಂಘ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.