<p><strong>ಅರಸೀಕೆರೆ: </strong>ತಾಲ್ಲೂಕಿನ ಚಲ್ಲಾಪುರ ಗ್ರಾಮದ ಚಿತ್ರಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವವು ಫೆ.21 ರಿಂದ 23 ರವರೆಗೆ ನಡೆಯಲಿದೆ.</p>.<p>ಫೆ.21 ರಂದು ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ ಮತ್ತು ಗಂಗಾಪೂಜೆ, ಗೋಪೂಜೆ, ಪುರಪ್ರವೇಶ. ಬಳಿಕ ಗಣಪತಿ ಪೂಜೆ, ಪಂಚ ಕಳಸ ಸ್ಥಾಪನೆ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ ನಡೆಯಲಿದೆ.</p>.<p>ಫೆ.22 ರಂದು ಬೆಳಿಗ್ಗೆ ಹಾರನಹಳ್ಳಿ ಓಬಳೇಶ್ವರ ಸ್ವಾಮಿ ಹಾಗೂ ಚಲ್ಲಾಪುರದ ದೂತರಾಯಸ್ವಾಮಿ ನೇತೃತ್ವದಲ್ಲಿ ನೂತನ ದೇವಾಲಯದ ಕಳಸಾರೋಹಣ. ಬಳಿಕ ಚಿತ್ರಲಿಂಗೇಶ್ವರ ಸ್ವಾಮಿ ದೇವರಿಗೆ ಮಹಾಮಂಗಳಾರತಿ.</p>.<p>ಬೆಳಿಗ್ಗೆ 11ಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 8ಕ್ಕೆ ಚಿತ್ರಲಿಂಗೇಶ್ವರ ಸ್ವಾಮಿಯ ‘ನಡೆಮುಡಿ’ ಮಹೋತ್ಸವ, ರಾತ್ರಿ 9.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.</p>.<p>ಫೆ.23 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಸ್ವಾಮಿಯವರ ‘ಕೆಂಡ ಸೇವೆ’ ಬಳಿಕ ದೂತರಾಯಸ್ವಾಮಿ ಹಾಗೂ ಕರಿಯಮ್ಮ ದೇವಿಯವರ ಮಣೇವು ಕಾರ್ಯಕ್ರಮ. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಚಲ್ಲಾಪುರದ ಚಿತ್ರಲಿಂಗೇಶ್ವರ ಸ್ವಾಮಿ ಯುವಕ ಸಂಘ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ: </strong>ತಾಲ್ಲೂಕಿನ ಚಲ್ಲಾಪುರ ಗ್ರಾಮದ ಚಿತ್ರಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವವು ಫೆ.21 ರಿಂದ 23 ರವರೆಗೆ ನಡೆಯಲಿದೆ.</p>.<p>ಫೆ.21 ರಂದು ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ ಮತ್ತು ಗಂಗಾಪೂಜೆ, ಗೋಪೂಜೆ, ಪುರಪ್ರವೇಶ. ಬಳಿಕ ಗಣಪತಿ ಪೂಜೆ, ಪಂಚ ಕಳಸ ಸ್ಥಾಪನೆ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ ನಡೆಯಲಿದೆ.</p>.<p>ಫೆ.22 ರಂದು ಬೆಳಿಗ್ಗೆ ಹಾರನಹಳ್ಳಿ ಓಬಳೇಶ್ವರ ಸ್ವಾಮಿ ಹಾಗೂ ಚಲ್ಲಾಪುರದ ದೂತರಾಯಸ್ವಾಮಿ ನೇತೃತ್ವದಲ್ಲಿ ನೂತನ ದೇವಾಲಯದ ಕಳಸಾರೋಹಣ. ಬಳಿಕ ಚಿತ್ರಲಿಂಗೇಶ್ವರ ಸ್ವಾಮಿ ದೇವರಿಗೆ ಮಹಾಮಂಗಳಾರತಿ.</p>.<p>ಬೆಳಿಗ್ಗೆ 11ಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 8ಕ್ಕೆ ಚಿತ್ರಲಿಂಗೇಶ್ವರ ಸ್ವಾಮಿಯ ‘ನಡೆಮುಡಿ’ ಮಹೋತ್ಸವ, ರಾತ್ರಿ 9.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.</p>.<p>ಫೆ.23 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಸ್ವಾಮಿಯವರ ‘ಕೆಂಡ ಸೇವೆ’ ಬಳಿಕ ದೂತರಾಯಸ್ವಾಮಿ ಹಾಗೂ ಕರಿಯಮ್ಮ ದೇವಿಯವರ ಮಣೇವು ಕಾರ್ಯಕ್ರಮ. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಚಲ್ಲಾಪುರದ ಚಿತ್ರಲಿಂಗೇಶ್ವರ ಸ್ವಾಮಿ ಯುವಕ ಸಂಘ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>