‘ಕೆಲಸ ಇಲ್ಲದೆ ನಲ್ವತ್ತು ದಿನಗಳು ಆಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದವು. ಕೆಲಸವೂ ಇಲ್ಲ. ಹಣವೂ ಇಲ್ಲ. ಹಾಗಾಗಿ ತವರಿಗೆ ಹೋಗಲು ನಿರ್ಧರಿಸಿದ್ಧೇವೆ. ಹೊಸ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಬಸ್ ಸಂಚಾರ ಇಲ್ಲವೆಂದರು. ಬಿಹಾರ್, ಜಾರ್ಖಂಡ್ಗೆ ಹೋಗಬೇಕು. ಯಶವಂತಪುರಕ್ಕೆ ತಲುಪಿದರೆ ಅಲ್ಲಿಂದ ಊರುಗಳಿಗೆ ರೈಲು ವ್ಯವಸ್ಥೆ ಮಾಡಲಾಗಿದೆ ಅಂದ್ರು. ಅದಕ್ಕಾಗಿ ಕಾಲ್ನಡಿಗೆಯಲ್ಲಿಯೇ ಹೊರಟಿದ್ದೇವೆ’ ಎಂದು ಕಾರ್ಮಿಕರು ಹೇಳಿದರು.