ತೆಲಂಗಾಣ, ಬೆಂಗಳೂರು ಪ್ರಯಾಣ ಹಿನ್ನೆಲೆ, ಶೀತ, ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ತೊಂದರೆ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ ಬಹುತೇಕ ಜನರಿಗೆ ಸೋಂಕು ತಗುಲಿದೆ. ಚೇತರಿಸಿಕೊಂಡ 34 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 1224 ಮಂದಿ ಗುಣಮುಖರಾಗಿದ್ದಾರೆ. 1728 ಸಕ್ರಿಯ ಪ್ರಕರಣಗಳಿವೆ. 40 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.