<p><strong>ಚನ್ನರಾಯಪಟ್ಟಣ:</strong> ಪಟ್ಟಣದ ‘ಎ 1’ ಕ್ರೀಡಾ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ 16 ವರ್ಷದೊಳಗಿನ ಆಹ್ವಾನಿತ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಚಿಕ್ಕಮಗಳೂರಿನ ರಾಣಾ ತಂಡ ಪ್ರಥಮ ಸ್ಥಾನಗಳಿಸಿತು. ಮಂಗಳೂರಿನ ಕರಾವಳಿ<br />ತಂಡ ದ್ವಿತೀಯ ಸ್ಥಾನಗಳಿಸಿತು.</p>.<p>ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಣಾ ತಂಡ 20 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಈ ತಂಡದ ಆಟಗಾರ ಶ್ರವಣ್ ಬಾಬು. ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.</p>.<p>ಕರಾವಳಿ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 80 ರನ್ ಗಳಿಸಿತು. ಪಮದ್ಯಪುರುಷ ಹಾಗೂ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಶ್ರವಣ್ ಬಾಬು ಪಡೆದುಕೊಂಡರೆ, ಅದೇ ತಂಡದ ವಿನಯ್ ಕುಮಾರ್, ಉತ್ತಮ ಬೌಲರ್ ಪ್ರಶಸ್ತಿ<br />ಪಡೆದರು. ಕರಾವಳಿಯ ಆಟಗಾರ ಪೂರನ್ ತಾಪಾ, ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.</p>.<p>ಎ.1 ಕ್ರೀಡಾ ಅಕಾಡೆಮಿಯ ನಿರ್ದೇಶಕರಾದ ರಂಗನಾಥ್, ಕೆ.ಎಲ್. ಯೋಗಣ್ಣ, ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್, ಸಮಾಜಸೇವಕ ಎಚ್.ಆರ್. ವೆಂಕಟೇಶ್, ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಬಿಜೆಪಿ ಮುಖಂಡ ಎ. ಮಂಜು ಫೈನಲ್<br />ಪಂದ್ಯವನ್ನು ವೀಕ್ಷಿಸಿ, ಶತಕ ಗಳಿಸಿದ ಶ್ರವಣ್ ಬಾಬು ಅವರನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ:</strong> ಪಟ್ಟಣದ ‘ಎ 1’ ಕ್ರೀಡಾ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ 16 ವರ್ಷದೊಳಗಿನ ಆಹ್ವಾನಿತ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಚಿಕ್ಕಮಗಳೂರಿನ ರಾಣಾ ತಂಡ ಪ್ರಥಮ ಸ್ಥಾನಗಳಿಸಿತು. ಮಂಗಳೂರಿನ ಕರಾವಳಿ<br />ತಂಡ ದ್ವಿತೀಯ ಸ್ಥಾನಗಳಿಸಿತು.</p>.<p>ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಣಾ ತಂಡ 20 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಈ ತಂಡದ ಆಟಗಾರ ಶ್ರವಣ್ ಬಾಬು. ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.</p>.<p>ಕರಾವಳಿ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 80 ರನ್ ಗಳಿಸಿತು. ಪಮದ್ಯಪುರುಷ ಹಾಗೂ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಶ್ರವಣ್ ಬಾಬು ಪಡೆದುಕೊಂಡರೆ, ಅದೇ ತಂಡದ ವಿನಯ್ ಕುಮಾರ್, ಉತ್ತಮ ಬೌಲರ್ ಪ್ರಶಸ್ತಿ<br />ಪಡೆದರು. ಕರಾವಳಿಯ ಆಟಗಾರ ಪೂರನ್ ತಾಪಾ, ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.</p>.<p>ಎ.1 ಕ್ರೀಡಾ ಅಕಾಡೆಮಿಯ ನಿರ್ದೇಶಕರಾದ ರಂಗನಾಥ್, ಕೆ.ಎಲ್. ಯೋಗಣ್ಣ, ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್, ಸಮಾಜಸೇವಕ ಎಚ್.ಆರ್. ವೆಂಕಟೇಶ್, ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಬಿಜೆಪಿ ಮುಖಂಡ ಎ. ಮಂಜು ಫೈನಲ್<br />ಪಂದ್ಯವನ್ನು ವೀಕ್ಷಿಸಿ, ಶತಕ ಗಳಿಸಿದ ಶ್ರವಣ್ ಬಾಬು ಅವರನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>