ಇದಲ್ಲದೆ, ವೃದ್ಧ ದಂಪತಿ ಪೂಜಾ ಕಾರ್ಯಗಳನ್ನು ನಡೆಸುವುದು, ಅಯ್ಯಂಗಾರ್ ಸಂಪ್ರದಾಯದ ವಧು ವರರು, ಹತ್ತಾರು ಬಗೆಯ ಗಣಪತಿ, ಗೋಪಿಕಾ ಸ್ತ್ರೀಯರ ಜೊತೆ ಕೃಷ್ಣ ನೃತ್ಯ, ಮೈಸೂರು ಮಹಾರಾಜ, ಮಹಾರಾಣಿ, ವಿಷ್ಟುವಿನ ದಶಾವತಾರ, ನವ ದುರ್ಗೆಯರು 10ನೇ ದಿನದ ನಂತರ ಚಾಮುಂಡೇಶ್ವರಿ ಮಹಿಷಾಸುರನ ವಧೆ ಮಾಡುವುದು, ಅಷ್ಟಲಕ್ಷ್ಮಿಯರ ಗೊಂಬೆಗಳನ್ನು ಒಂದು ಸಾಲಿನಲ್ಲಿಟ್ಟಿದ್ದಾರೆ. ರಾಮನ ಪಟ್ಟಾಭಿಷೇಕ ಸಮಾರಂಭ, ರಾಮ, ಸೀತೆ, ಜಯ, ವಿಜಯ, ಲಕ್ಷ್ಮಣ, ಬ್ರಾಹ್ಮಣ ದಂಪತಿ, ಸಂಗೀತಗಾರರು, ವಿದ್ವಾಂಸರು, ಪಟ್ಟಾಭಿಷೇಕ ವೀಕ್ಷಣೆಗೆ ದೇಶ ವಿದೇಶದಿಂದ ಬಂದ ಪ್ರಜೆಗಳು, ವಾದ್ಯಗೋಷ್ಠಿ, ವಾದ್ಯದ ಶಬ್ದಕ್ಕೆ ಬೆದರಿ ಓಡುತ್ತಿರುವ ಪ್ರಾಣಿಗಳು, ಪಟ್ಟಾಭಿಷೇಕ ನಂತರ ಕೃಷ್ಣನ ಭೋಜನ ಮಾಡುತ್ತಿರುವ ದೃಶ್ಯಗಳನ್ನು ಸಾರುವ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ.