ಆಸ್ತಮಾದಿಂದ ಬಳಲುತ್ತಿದ್ದ ರಾಮೇಗೌಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್ ಗ್ರಾಮದಲ್ಲಿಯೇ ಕೆಟ್ಟು ನಿಂತಿತು. ಬದಲಿ ವಾಹನಕ್ಕೆ ಕರೆ ಮಾಡಲಾಯಿತಾದರೂ ಅದು ಬರುವಷ್ಟರಲ್ಲಿ ಎರಡು ತಾಸು ಕಳೆಯಿತು. ಅಲ್ಲಿಯವರೆಗೂ ಕುಟುಂಬದವರು ರೋಗಿಯನ್ನು ರಸ್ತೆ ಬದಿಯಲ್ಲಿಯೇ ಮಲಗಿಸಿಕೊಂಡು ಕಾದು ಕುಳಿತಿದ್ದರು. ಕೊನೆಗೂ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.