ಸಚಿವರಾದ ಕೆ.ಗೋಪಾಲಯ್ಯ, ಮಾಧುಸ್ವಾಮಿ, ಸಿ.ಪಿ.ಯೋಗೇಶ್ವರ್ ಹಾಗೂ ಅಧಿಕಾರಿಗಳು ಪ್ರತ್ಯೇಕವಾಗಿ ಏರಿ ವೀಕ್ಷಿಸಿ, ಕೊಟ್ಟ ಭರವಸೆಗಳು ಈಡೇರಲಿಲ್ಲ. ವರ್ಷದ ಹಿಂದೆ ಬಿರುಕು ಕಾಣಿಸಿಕೊಂಡಿದ್ದ ಕೆರೆ ಏರಿ ನಾಲ್ಕು ತಿಂಗಳಿನಿಂದ ಕುಸಿಯುತ್ತಲೇ ಇದೆ. ಹಳೇಬೀಡು ವೀಕ್ಷಿಸಲು ಬರುವ ಪ್ರವಾಸಿಗರು ಸಹ ಕೆರೆ ಏರಿ ರಸ್ತೆ ಮೂಲಕವೇ ಬರಬೇಕಿದೆ. ಹಳ್ಳಿಗಳ ರೈತರು ಕೃಷಿ ಉತ್ಪನ್ನಗಳನ್ನು ಕೆರೆ ಏರಿ ಮೇಲೆಯೇ ಸಾಗಣೆ ಮಾಡಬೇಕಿದೆ.