ಸಕಲೇಶಪುರ: ಸಮೀಪದ ಮಳಲಿ ಗ್ರಾಮದಲ್ಲಿ ಕಾಡಾನೆ ಮರಿಯೊಂದು ಅಸ್ವಸ್ಥಗೊಂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಮರಿಆನೆಗೆ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಚಪ್ಪರ ಹಾಕಿ ಆಸರೆ ನೀಡಿದ್ದಾರೆ.
‘ಮೂರು ದಿನಗಳ ಹಿಂದೆ ತಾಯಿಆನೆ ಹಾಗೂ ಆನೆ ಹಿಂಡು ಮರಿಯ ಸಮೀಪವೇ ಇದ್ದವು. ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಹಾಲು ಕುಡಿಯುವುದಕ್ಕೂ ಆನೆಮರಿಗೆ ಸಾಧ್ಯವಾಗಿಲ್ಲ. ಆನೆಗಳು ಮರಿಯನ್ನು ಬಿಟ್ಟು ಹೋಗಿವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ
‘ಆನೆಮರಿಯನ್ನು ಹುಡಿಕಿಕೊಂಡು ತಾಯಿಆನೆ ಪುನಃ ಇಲ್ಲಿಗೆ ಬರುವ ಸಾಧ್ಯತೆ ಇದೆ. ಬರದೆ ಇದ್ದರೆ ಅದನ್ನು ಆನೆಧಾಮಕ್ಕೆ ಸಾಗಿಸಿ ಆರೈಕೆ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರು ತಿಳಿಸಿದರು.