ಸ್ವರ್ಣಗೌರಿ ದೇವಿಯ ದೇವಾಲಯದ ಸೇವಾ ಸಮಿತಿ ಮುಖ್ಯಸ್ಥ ಶಿವಲಿಂಗಪ್ಪ ಮಾತನಾಡಿ, ‘160 ವರ್ಷಗಳ ಹಿನ್ನೆಲೆ ಹೊಂದಿರುವ ಉತ್ಸವವು ಪ್ರತಿ ವರ್ಷ 9 ದಿನಗಳವರೆಗೆ ನಡೆಯುತ್ತಿತ್ತು. ಹರಕೆ ಹೊರುವುದು ಮತ್ತು ಕೋರಿಕೆಗಳ ಈಡೇರಿಕೆಯ ಸಂಕಲ್ಪ ಮಾಡುವುದು, ದೇವಿಗೆ ದುಗ್ಗುಳ ಸೇವೆ, ಸೀರೆ ಮತ್ತು ರವಿಕೆ ಸಮರ್ಪಿಸುವುದು, ಅನ್ನಸಂತರ್ಪಣೆ ಸೇವೆ ನಡೆಯುತ್ತಿತ್ತು. ಆದರೆ ಎರಡು ವರ್ಷಗಳಿಂದ ಕೋವಿಡ್ನಿಂದಾಗಿ ಭಕ್ತರು ಹರಕೆ ತೀರಿಸಲು ಮತ್ತು ಸಂಕಲ್ಪ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶವು ಕೋವಿಡ್ನಿಂದ ಪಾರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು’ ಎಂದು ತಿಳಿಸಿದರು.