ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮುಂಗಾರು ಪೂರ್ವ ಮಳೆ: ಬರದ ಬವಣೆಯಿಂದ ಬಿತ್ತನೆಯತ್ತ ರೈತ ಸಮೂಹ

Published : 20 ಮೇ 2024, 8:53 IST
Last Updated : 20 ಮೇ 2024, 8:53 IST
ಫಾಲೋ ಮಾಡಿ
Comments
ಅರಕಲಗೂಡು ತಾಲ್ಲೂಕಿನಲ್ಲಿ ನಾಟಿ ಕಾರ್ಯಕ್ಕೆ ತಂಬಾಕು ಸಸಿಗಳನ್ನು ಸಿದ್ದಗೊಳಿಸುತ್ತಿರುವ ರೈತ ಮಹಿಳೆಯರು
ಅರಕಲಗೂಡು ತಾಲ್ಲೂಕಿನಲ್ಲಿ ನಾಟಿ ಕಾರ್ಯಕ್ಕೆ ತಂಬಾಕು ಸಸಿಗಳನ್ನು ಸಿದ್ದಗೊಳಿಸುತ್ತಿರುವ ರೈತ ಮಹಿಳೆಯರು
ಹಿರೀಸಾವೆ ಹೋಬಳಿಯಲ್ಲಿ ಪೂರ್ವ ಮುಂಗಾರು ಸಿದ್ದತೆ ಮಾಡಲಾಗುತ್ತಿದೆ.
ಹಿರೀಸಾವೆ ಹೋಬಳಿಯಲ್ಲಿ ಪೂರ್ವ ಮುಂಗಾರು ಸಿದ್ದತೆ ಮಾಡಲಾಗುತ್ತಿದೆ.
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ದಾಸ್ತಾನಿನ ಕುರಿತು ಕೃಷಿ ಅಧಿಕಾರಿ ಜಹಾನ್ ತಾಜ್ ಮಾಹಿತಿ ನೀಡಿದರು.
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ದಾಸ್ತಾನಿನ ಕುರಿತು ಕೃಷಿ ಅಧಿಕಾರಿ ಜಹಾನ್ ತಾಜ್ ಮಾಹಿತಿ ನೀಡಿದರು.
ಹಳೇಬೀಡು ಸಮೀಪದ ಚೀಲನಾಯ್ಕನಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಸಿದ್ದ ಮಾಡಿಕೊಳ್ಳಲು ಸಾಧ್ಯವಾಗದಂತೆ ತೇವಾಂಶಗೊಂಡಿರುವ ಜಮೀನು
ಹಳೇಬೀಡು ಸಮೀಪದ ಚೀಲನಾಯ್ಕನಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಸಿದ್ದ ಮಾಡಿಕೊಳ್ಳಲು ಸಾಧ್ಯವಾಗದಂತೆ ತೇವಾಂಶಗೊಂಡಿರುವ ಜಮೀನು
43 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ
ಅರಕಲಗೂಡು ತಾಲ್ಲೂಕಿನಲ್ಲಿ ಹದಮಳೆಯಾಗಿದ್ದು ರೈತರು ಕೃಷಿ ಕಾರ್ಯಕ್ಕೆ ಸಿದ್ದತೆ ನಡೆಸಿದ್ದಾರೆ. ಮುಂಗಾರು ಹಂಗಾಮಿನ  ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕಿನ ನಾಟಿ ಕಾರ್ಯ ಬಿರುಸಿನಿಂದ ನಡೆದಿದೆ. ಮುಸುಕಿನ ಜೋಳ ಹಾಗೂ ಆಲೂಗಡ್ಡೆ ಕೃಷಿಗೆ ಬೆಳೆಗಾರರು ಸಿದ್ದತೆ ನಡೆಸಿದ್ದಾರೆ. ಬಿತ್ತನೆ ಬೀಜ ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿಗೆ 43640 ಹೆಕ್ಟೇರ್ ಬೆಳೆ ವಿಸ್ತೀರ್ಣದ ಗುರಿ ಹೊಂದಲಾಗಿದೆ.  ಮೇ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದು ಮುಸುಕಿನ ಜೋಳ 800 ಕ್ವಿಂಟಲ್  ಅಲಸಂದೆ 403 ಕ್ವಿಂಟಲ್ ಹೆಸರು 11 ಕ್ವಿಂಟಲ್  ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 102.25 ಕ್ವಿಂಟಲ್ ಮುಸುಕಿನ ಜೋಳ 55.2 ಕ್ವಿಂಟಲ್ ಅಲಸಂದೆ 2 ಕ್ವಿಂಟಲ್‌ ಹೆಸರು ಬಿತ್ತನೆ ಬೀಜ ದಾಸ್ತಾನು ಇದೆ. ರಸಗೊಬ್ಬರ ಅಗತ್ಯವಾದ ದಾಸ್ತಾನು ಇದೆ. ಕಳೆದ ಬಾರಿ ಮಳೆಯಾಗದೇ ಬರ ಕಾಣಿಸಿಕೊಂಡಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟವಾಗಿಲ್ಲ. ದಾಸ್ತಾನು ಹಾಗೆ ಉಳಿದಿದೆ. ಮುಂಗಾರು ಹಂಗಾಮಿನ ಕೃಷಿ  ಪರಿಕರಗಳ ಅಗತ್ಯವನ್ನು ಪೂರೈಸಲು ಇಲಾಖೆ  ಸಿದ್ದತೆ ನಡೆಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದ್ದಾರೆ. ಕಳೆದ ವರ್ಷ ರೈತರು ಬರಗಾಲದ ಬವಣೆಯಲ್ಲಿ ನೊಂದಿದ್ದಾರೆ. ಈ ಬಾರಿ ಮುಂಗಾರು ಆಶಾದಾಯಕ ಭಾವನೆ ಮೂಡಿಸುತ್ತಿದ್ದು ಸರ್ಕಾರ ಹಾಗೂ ಕೃಷಿ ಇಲಾಖೆ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ  ಅಧ್ಯಕ್ಷ ಸೀಬಳ್ಳಿ ಯೋಗಣ್ಣ ತಿಳಿಸಿದರು. ರೈತರಿಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಆದ್ಯತೆ ಮೇಲೆ ಒದಗಿಸಬೇಕು. ಕಳೆದ ಸಾಲಿನ ಬರಪರಿಹಾರದ ಮೊತ್ತ ಕೆಲವರಿಗೆ ಮಾತ್ರ ದೊರೆತಿದ್ದು ಎಲ್ಲ ರೈತರಿಗೆ ತಲುಪಿಲ್ಲ.  ತಾಲ್ಲೂಕು ಆಡಳಿತ ಕೂಡಲೇ ಬರ ಪರಿಹಾರದ ಹಣವನ್ನು ಇತರೆ ಸಾಲಗಳಿಗೆ ಮುಟ್ಟುಗೋಲು ಹಾಕಿಕೊಳ್ಳದೇ ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೀಜ ಗೊಬ್ಬರ ದಾಸ್ತಾನು
ಪ್ರಸ್ತುತ ಯಾವುದೇ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಇಲ್ಲ. ಜಿಲ್ಲೆಯಲ್ಲಿ ರೈತರಿಗೆ ಬೇಕಾದ ಅಗತ್ಯ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ರಾಜಸುಲೋಚನಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೂರ್ಯಕಾಂತಿ ಬೀಜ ಪೂರೈಕೆ ಬೇಲೂರು ತಾಲ್ಲೂಕಿನಲ್ಲಿ ಶೇ 75 ರಷ್ಟು ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದೆ. ಹಳೇಬೀಡು ಹೋಬಳಿಯಲ್ಲಿ ಸೂರ್ಯಕಾಂತಿ ಸಹ ಬಿತ್ತನೆ ಮಾಡುತ್ತಾರೆ. ಹೀಗಾಗಿ ಹಳೇಬೀಡು ಕೃಷಿ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಪೂರೈಕೆ ಮಾಡಲಾಗುತ್ತಿದೆ. ಎಸ್.ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ  ಕಡ್ಡಾಯವಾಗಿ ನೋಂದಣಿ ಮಾಡಿ ಪೂರ್ವ ಮುಂಗಾರು ಬೆಳೆಗಳನ್ನು ಹಾಕಿರುವ ಬಗ್ಗೆ ರೈತರು 2024–25ನೇ ಸಾಲಿನ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಎಫ್ಐಡಿ ಸಂಖ್ಯೆ ಮತ್ತು ಸರ್ವೆ ನಂಬರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಜಹಾನ್ ತಾಜ್  ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬೀಜಗಳ ಬೆಲೆ ಕಡಿಮೆ ಮಾಡಿ ಕೃಷಿ ಇಲಾಖೆ ನೀಡುತ್ತಿರುವ ಬಿತ್ತನೆ ಬೀಜಗಳ ಬೆಲೆ ದುಬಾರಿಯಾಗಿವೆ. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಕಡಿಮೆ ಬೆಲೆಗೆ ರೈತರಿಗೆ ನೀಡಬೇಕು. ಎಚ್.ಕೆ. ರಘು ಅಧ್ಯಕ್ಷರು ಹಾಸನ ಜಿಲ್ಲಾ ರೈತ ಸಂಘ. ಅಗತ್ಯ ಸಿದ್ಧತೆ ಅರಕಲಗೂಡು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಕೃಷಿಗೆ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳನ್ನು ಒದಗಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಕೆ.ಜಿ.ಕವಿತಾ ಸಹಾಯಕ ಕೃಷಿ ನಿರ್ದೇಶಕಿ ಅರಕಲಗೂಡು ಬರ ಪರಿಹಾರ ಸಾಲಕ್ಕೆ ಜಮಾ ಬೇಡ ಕಳೆದ ವರ್ಷದ ಬರಪರಿಹಾರದ ಹಣವನ್ನು ಬೇರೆ ಸಾಲದ ಬಾಕಿಗಳಿಗೆ ಹಿಡಿದುಕೊಳ್ಳದೇ ಪೂರ್ಣಪ್ರಮಾಣದಲ್ಲಿ ನೀಡುವ ಮೂಲಕ ರೈತರ ಕೃಷಿ ಕಾರ್ಯಗಳಿಗೆ ನೆರವಾಗಬೇಕು ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ    ಸಹಾಯವಾಣಿ ಆರಂಭ ಆಲೂರು ಮಿನಿ ವಿಧಾನಸೌಧ ಕಾರ್ಯಾಲಯದಲ್ಲಿ ದೂರವಾಣಿ ಸಂಖ್ಯೆ 08170 –21822 ಸಹಾಯವಾಣಿ ತೆರೆಯಲಾಗಿದೆ. ಯಾವುದೇ ನಷ್ಟ ಸಂಭವಿಸಿದರೆ ಕೂಡಲೆ ದೂರವಾಣಿ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಈಗಾಗಲೆ ಮನವಿ ಮಾಡಲಾಗಿದೆ. ನಂದಕುಮಾರ್ ಆಲೂರು ತಹಶೀಲ್ದಾರ್ ತುರ್ತು ಕಾಮಗಾರಿಗೆ ಸಿದ್ಧತೆ ಈಗಾಗಲೇ ತಂತಿ ಹಾದು ಹೋಗಿರುವ ದಾರಿಯಲ್ಲಿ ತಡೆಯಾಗಿದ್ದ ಗಿಡ ಗಂಟೆಗಳನ್ನು ತೆಗೆಯಲಾಗಿದೆ. ಅಡಚಣೆಯಾದ ಕ್ಷಣದಲ್ಲಿ ತುರ್ತು ಕಾಮಗಾರಿ ಮಾಡಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಎನ್. ಡಿ. ಕುಮಾರ್ ಸೆಸ್ಕ್ ಸಹಾಯಕ ಎಂಜಿನಿಯರ್‌ ಆಲೂರು. ಬೀಜ ಗೊಬ್ಬರ ದಾಸ್ತಾನು ಚನ್ನರಾಯಪಟ್ಟಣ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ ಹೆಸರು ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಬೀಜ ದಾಸ್ತಾನು ಇದೆ. ರೈತಾಪಿ ವರ್ಗದವರಿಗೆ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ ರಸಗೊಬ್ಬರ ದಾಸ್ತಾನು  ಇದೆ. ಎಂ.ಎಸ್. ಜನಾರ್ದನ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನರಾಯಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT