ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಾಸನ | ಖಾಸಗಿ ವಾಹಿನಿಗೆ ದುಡ್ಡು ಹಾಕಿದ್ದ ಉದ್ಯಮಿ: ವಾಪಸ್‌ ಕೇಳಿದ್ದಕ್ಕೆ ಕೊಲೆ

Published : 12 ಆಗಸ್ಟ್ 2023, 13:10 IST
Last Updated : 12 ಆಗಸ್ಟ್ 2023, 13:10 IST
ಫಾಲೋ ಮಾಡಿ
Comments
6 ತಿಂಗಳ ಹಿಂದೆಯೇ ಸಂಚು
ಕೃಷ್ಣೇಗೌಡರಿಂದ ₹ 4 ಕೋಟಿಗೂ ಹೆಚ್ಚು ಹಣವನ್ನು ಯೋಗಾನಂದ ಪಡೆದಿದ್ದು ಈ ಹಣವನ್ನು ಹಿಂದಿರುಗಿಸುವ ಬದಲು ಕೃಷ್ಣೇಗೌಡರನ್ನೇ ಕೊಲೆ ಮಾಡುವ ಯೋಜನೆ ರೂಪಿಸಲಾಗಿತ್ತು. ಎರಡು ವರ್ಷದ ಹಿಂದೆ ಖಾಸಗಿ ವಾಹಿನಿ ಪಾಲುದಾರನಾಗಿದ್ದ ಸುರೇಶ್ ಹಾಗೂ ಯೋಗಾನಂದ ಸೇರಿ ಕೊಲೆಯ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಎಸ್ಪಿ ಹೇಳಿದರು. ಕೃಷ್ಣೇಗೌಡರಿಗೂ ಕೊಲೆ ಸಂಚಿನ ಬಗ್ಗೆ ತಿಳಿದಿತ್ತು. ಕೃಷ್ಣೇಗೌಡರ ಕೊಲೆಗೆ ಸಂಚು ರೂಪಿಸಿದ್ದ ಧ್ವನಿ ಮುದ್ರಿಕೆ (ಆಡಿಯೋ ರೆಕಾರ್ಡ್) ಕೃಷ್ಣೇಗೌಡರಿಗೆ ದೊರೆತಿತ್ತು.  ಆದರೂ ಕೃಷ್ಣೇಗೌಡರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿರಲಿಲ್ಲ. ಯಾವುದೇ ದೂರು ದಾಖಲಿಸಿರಲಿಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT