ಹೆಚ್ಚಿನ ರೈತರು ಶ್ರೀಗಂಧ ಕೃಷಿ ಕೈಗೊಂಡರೆ ಬೆಳೆ ರಕ್ಷಣೆಗೆ ಅನುಕೂಲ. ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಬಹುದು. ಶ್ರೀಗಂಧ ಕೃಷಿಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ
ರವಿ ಎಂ.ಬಿ. ಶ್ರೀಗಂಧ ಬೆಳೆಗಾರ ಕೆ.ಮಲ್ಲಾಪುರ
ಕಾಡುಕೃಷಿಯಿಂದ ಸ್ವಾವಲಂಬಿ ಆಗುವ ಜೊತೆಗೆ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಶುದ್ಧ ಆಮ್ಲಜನಕ ದೊರಕುವುದರಿಂದ ರೈತರು ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ
ಎಸ್.ಎನ್.ಯೋಗೀಶಪ್ಪ ಕಾಡು ಕೃಷಿಕ ಜಿ.ಸಾಣೇನಹಳ್ಳಿ
ವಿಷಮುಕ್ತ ಉತ್ಪಾದನೆ
ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ಜೀವಾಮೃತ ಹಾಗೂ ಗೋಕೃಪಾ ಅಮೃತವನ್ನು ಬೆಳೆಗೆ ಬಳಕೆ ಮಾಡುತ್ತಿದ್ದೇವೆ. ಕೀಟ ನಿಯಂತ್ರಣಕ್ಕೆ ಔಷಧ ಬಳಸುತ್ತಿಲ್ಲ. ಮನೆಯಲ್ಲಿಯೇ ತಯಾರಿಸಿದ ಹುಳಿ ಮಜ್ಜಿಗೆ ಸಿಂಪಡಣೆ ಮಾಡಿ ಕೀಟ ಹಾಗೂ ರೋಗಗಳನ್ನು ಹತೋಟಿಗೆ ತರುತ್ತಿದ್ದೇವೆ. ನಮ್ಮ ತೋಟದ ಪೇರಲ ಬಾಳೆ ವಿಷಯುಕ್ತವಾಗಿವೆ. ಹೀಗಾಗಿ ಜನರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ರವಿ ಎಂ.ಬಿ. ವಿವರಿಸುತ್ತಾರೆ.