<p><strong>ಹಳೇಬೀಡು:</strong> ರೈತರು ತಾಳೆ ಕೃಷಿ ಕೈಗೊಳ್ಳುವುದರಿಂದ ನಿರ್ದಿಷ್ಟ ಆದಾಯ ಪಡೆಯಬಹುದು ಎಂದು ಪತಂಜಲಿ ಕಂಪನಿ ಕ್ಷೇತ್ರಾಧಿಕಾರಿ ಹನುಮೇಗೌಡ ಹೇಳಿದರು.</p>.<p>ಇಲ್ಲಿನ ರಾಜನಶಿರಿಯೂರು ಗ್ರಾಮದ ಪುಟ್ಟಮಲ್ಲೇಗೌಡರ ತೋಟದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಕಂಪನಿ ಆಶ್ರಯದಲ್ಲಿ ಬುಧವಾರ ನಡೆದ ತಾಳೆಬೆಳೆ ಯೋಜನೆ ಅಡಿಯಲ್ಲಿ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತಾಳೆ ಬೆಳೆ ನಾಟಿ ಮಾಡಿದ 4 ವರ್ಷಗಳ ಬಳಿಕ ಫಸಲು ಬರುತ್ತದೆ. ಮಾರುಕಟ್ಟೆಗಾಗಿ ಪರದಾಡುವಂತಿಲ್ಲ. ಪತಂಜಲಿ ಕಂಪನಿ ನೇರವಾಗಿ ರೈತರಿಂದ ತಾಳೆ ಫಸಲನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತದೆ’ ಎಂದು ಹೇಳಿದರು.</p>.<p>‘ತಾಳೆ ಕೃಷಿಗೆ ಇಲಾಖೆಯಿಂದ ಸಹಾಯ ಧನವೂ ದೊರಕುತ್ತದೆ. ತಿಂಗಳಿಗೆ ಎರಡು ಬಾರಿ ಕೊಯ್ಲು ಮಾಡಿ ಮಾರಾಟ ಮಾಡಲು ಅವಕಾಶವಿದೆ. ರೈತರು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ತಾಳೆ ಕೃಷಿಯ ಮಾಹಿತಿ ಪಡೆಯಬೇಕು’ ಎಂದು ಹನುಮೇಗೌಡ ಹೇಳಿದರು.</p>.<p>ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ನಾಗರಾಜು ಮಾತನಾಡಿ, ‘ಅಡಿಕೆಗೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1 ಲೀಟರ್ ನೀರಿಗೆ 1 ಮಿಲಿ ಪ್ರೋಫಿನೋಕೋನಜೋಲ್ ಸಿಂಪಡಣೆ ಮಾಡಬೇಕು. <br /> ತೆಂಗಿನ ಕಾಂಡಾ ಸೋರುವ ರೋಗ ನಿಯಂತ್ರಣಕ್ಕೆ ಹೆಕ್ಸಾಕೊನೋಝೋಲ್ ಎಂಬ 5 ಮಿಲಿ ಔಷಧವನ್ನು 100 ಮಿಲಿ ನೀರಿಗೆ ಮಿಶ್ರಣ ಮಾಡಿ, ತೆಂಗಿನ ಗಿಡದ ಬೇರಿಗೆ ಬಳಕೆ ಮಾಡಬೇಕು’ ಎಂದು ಸಲಹೆ ಮಾಡಿದರು.</p>.<p>ತೋಟಗಾರಿಕಾ ಅಧಿಕಾರಿ ಮಧು ಕುಮಾರ್ ಕೆ.ಎಸ್ ಮಾತನಾಡಿ, ‘ತಾಳೆಯಿಂದ ಅಡುಗೆ ಎಣ್ಣೆ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸಬಹುದು, ಹೀಗಾಗಿ ತಾಳೆ ಫಸಲಿಗೆ ನಿರ್ದಿಷ್ಟ ಮಾರುಕಟ್ಟೆ ಇದೆ. ತಾಳೆಯೊಂದಿಗೆ ಅಂತರ ಬೆಳೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯಲು ಅವಕಾಶವಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ದೊಡ್ಡಬ್ಯಾಡಗೆರೆ ಪ್ರಗತಿಪರ ರೈತ ಅನಂತ್ ಕುಮಾರ್ ಅವರನ್ನು ಗೌರವಿಸಲಾಯಿತು. <br /> ಕೃಷಿ ಅಧಿಕಾರಿ ಹೇಮಂತ್ ಕುಮಾರ್, ತೋಟಗಾರಿಕೆ ಅಧಿಕಾರಿಗಳಾದ ರಂಜಿತಾ, ಕಿಶೋರ್ ಮಾತನಾಡಿದರು.</p>.<p>ರೈತ ಪುಟ್ಟಮಲ್ಲೇಗೌಡ, ಶಿಕ್ಷಕ ಮೋಹನರಾಜು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ರೈತರು ತಾಳೆ ಕೃಷಿ ಕೈಗೊಳ್ಳುವುದರಿಂದ ನಿರ್ದಿಷ್ಟ ಆದಾಯ ಪಡೆಯಬಹುದು ಎಂದು ಪತಂಜಲಿ ಕಂಪನಿ ಕ್ಷೇತ್ರಾಧಿಕಾರಿ ಹನುಮೇಗೌಡ ಹೇಳಿದರು.</p>.<p>ಇಲ್ಲಿನ ರಾಜನಶಿರಿಯೂರು ಗ್ರಾಮದ ಪುಟ್ಟಮಲ್ಲೇಗೌಡರ ತೋಟದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಕಂಪನಿ ಆಶ್ರಯದಲ್ಲಿ ಬುಧವಾರ ನಡೆದ ತಾಳೆಬೆಳೆ ಯೋಜನೆ ಅಡಿಯಲ್ಲಿ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತಾಳೆ ಬೆಳೆ ನಾಟಿ ಮಾಡಿದ 4 ವರ್ಷಗಳ ಬಳಿಕ ಫಸಲು ಬರುತ್ತದೆ. ಮಾರುಕಟ್ಟೆಗಾಗಿ ಪರದಾಡುವಂತಿಲ್ಲ. ಪತಂಜಲಿ ಕಂಪನಿ ನೇರವಾಗಿ ರೈತರಿಂದ ತಾಳೆ ಫಸಲನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತದೆ’ ಎಂದು ಹೇಳಿದರು.</p>.<p>‘ತಾಳೆ ಕೃಷಿಗೆ ಇಲಾಖೆಯಿಂದ ಸಹಾಯ ಧನವೂ ದೊರಕುತ್ತದೆ. ತಿಂಗಳಿಗೆ ಎರಡು ಬಾರಿ ಕೊಯ್ಲು ಮಾಡಿ ಮಾರಾಟ ಮಾಡಲು ಅವಕಾಶವಿದೆ. ರೈತರು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ತಾಳೆ ಕೃಷಿಯ ಮಾಹಿತಿ ಪಡೆಯಬೇಕು’ ಎಂದು ಹನುಮೇಗೌಡ ಹೇಳಿದರು.</p>.<p>ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ನಾಗರಾಜು ಮಾತನಾಡಿ, ‘ಅಡಿಕೆಗೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1 ಲೀಟರ್ ನೀರಿಗೆ 1 ಮಿಲಿ ಪ್ರೋಫಿನೋಕೋನಜೋಲ್ ಸಿಂಪಡಣೆ ಮಾಡಬೇಕು. <br /> ತೆಂಗಿನ ಕಾಂಡಾ ಸೋರುವ ರೋಗ ನಿಯಂತ್ರಣಕ್ಕೆ ಹೆಕ್ಸಾಕೊನೋಝೋಲ್ ಎಂಬ 5 ಮಿಲಿ ಔಷಧವನ್ನು 100 ಮಿಲಿ ನೀರಿಗೆ ಮಿಶ್ರಣ ಮಾಡಿ, ತೆಂಗಿನ ಗಿಡದ ಬೇರಿಗೆ ಬಳಕೆ ಮಾಡಬೇಕು’ ಎಂದು ಸಲಹೆ ಮಾಡಿದರು.</p>.<p>ತೋಟಗಾರಿಕಾ ಅಧಿಕಾರಿ ಮಧು ಕುಮಾರ್ ಕೆ.ಎಸ್ ಮಾತನಾಡಿ, ‘ತಾಳೆಯಿಂದ ಅಡುಗೆ ಎಣ್ಣೆ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸಬಹುದು, ಹೀಗಾಗಿ ತಾಳೆ ಫಸಲಿಗೆ ನಿರ್ದಿಷ್ಟ ಮಾರುಕಟ್ಟೆ ಇದೆ. ತಾಳೆಯೊಂದಿಗೆ ಅಂತರ ಬೆಳೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯಲು ಅವಕಾಶವಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ದೊಡ್ಡಬ್ಯಾಡಗೆರೆ ಪ್ರಗತಿಪರ ರೈತ ಅನಂತ್ ಕುಮಾರ್ ಅವರನ್ನು ಗೌರವಿಸಲಾಯಿತು. <br /> ಕೃಷಿ ಅಧಿಕಾರಿ ಹೇಮಂತ್ ಕುಮಾರ್, ತೋಟಗಾರಿಕೆ ಅಧಿಕಾರಿಗಳಾದ ರಂಜಿತಾ, ಕಿಶೋರ್ ಮಾತನಾಡಿದರು.</p>.<p>ರೈತ ಪುಟ್ಟಮಲ್ಲೇಗೌಡ, ಶಿಕ್ಷಕ ಮೋಹನರಾಜು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>