ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಶಾಲಾ ಕೊಠಡಿಗಳಿಗೆ ಬೇಕಿದೆ ದುರಸ್ತಿ ಭಾಗ್ಯ

ಕೆಲವೆಡೆ ಕೋಣೆಗಳ ಚಾವಣಿ ಕುಸಿತ, ಗೋಡೆಗಳು ಶಿಥಿಲ; ಅನುದಾನ ಬಿಡುಗಡೆಗೆ ಸರ್ಕಾರದತ್ತ ನೋಟ
Published : 17 ಜೂನ್ 2024, 6:40 IST
Last Updated : 17 ಜೂನ್ 2024, 6:40 IST
ಫಾಲೋ ಮಾಡಿ
Comments
ಪಿಎಂಶ್ರೀ ಯೋಜನೆಗೆ ಆಯ್ಕೆಯಾದ ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ
ಪಿಎಂಶ್ರೀ ಯೋಜನೆಗೆ ಆಯ್ಕೆಯಾದ ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ
ದುರಸ್ತಿಗೆ ₹54 ಲಕ್ಷ ಮಂಜೂರು
ಅರಕಲಗೂಡು ತಾಲ್ಲೂಕಿನಲ್ಲಿ 27 ಪ್ರೌಢಶಾಲೆ 114 ಹಿರಿಯ ಪ್ರಾಥಮಿಕ ಹಾಗೂ 167 ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಎಲ್ಲವೂ ಕಟ್ಟಡಗಳನ್ನು ಹೊಂದಿವೆ. ಪ್ರೌಢಶಾಲೆಗಳಲ್ಲಿ ಪಟ್ಟಣದ ಬಾಲಕಿಯರು ಹಾಗೂ ಬಾಲಕರು ಗಂಜಲಗೂಡು ದೊಡ್ಡಮಗ್ಗೆ ಮತ್ತು ಕೊಣನೂರು ಬಿಎಸ್ಎಸ್ ಸೇರಿದಂತೆ 5 ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 82 ಶಾಲಾ ಕಟ್ಟಡಗಳು ದುರಸ್ತಿ ಆಗಬೇಕಿದೆ. ₹ 54.24 ಲಕ್ಷ ಹಣ ಬಿಡುಗಡೆಗೆ ಅನುಮೋದನೆಯಾಗಿದ್ದು ತುರ್ತಾಗಿ ದುರಸ್ತಿ ಆಗಬೇಕಾದ ಕಟ್ಟಡಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದರು. ಶಾಲೆಗಳಲ್ಲಿ ಒಂದು ಅಥವಾ ಎರಡು ಕೊಠಡಿಗಳು ದುರಸ್ತಿ ಆಗಬೇಕು. ಹೀಗಾಗಿ ಉಳಿದ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಎಲ್ಲ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ. ಕೆಲವು ಶಾಲೆಗಳ ಶೌಚಾಲಯಗಳು ದುರಸ್ತಿ ಆಗಬೇಕಿದೆ. ಹಲವೆಡೆ ಶಾಲೆಗಳ ಆವರಣದಲ್ಲಿರುವ ಮರಗಳ ಕೆಳಗೆ ಶೌಚಾಲಯ ನಿರ್ಮಿಸಿರುವ ಕಾರಣ ಮರದ ಬೇರುಗಳು ಶೌಚಾಲಯದ ಕಟ್ಟಡದ ಕೆಳಗೆ ಹಾದು ಹೋಗಿ ಹಾಗೂ ಕಸಕಡ್ಡಿಗಳು ಉದುರಿ ತೊಂದರೆಯಾಗುತ್ತಿದೆ. ಪಟ್ಟಣದ ಬಾಲಕರು ಬಾಲಕಿಯರು ಮತ್ತು ಕೋಟೆ ಪ್ರೌಢಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ತಲಾ ₹5.20 ಲಕ್ಷ ಮತ್ತು ಸಾಲಗೇರಿ ಬಡಾವಣೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ₹4.20ಲಕ್ಷ ಬಿಡುಗಡೆಯಾಗಿದೆ. 50 ವರ್ಷ ಹಿಂದೆ ನಿರ್ಮಾಣವಾಗಿ ಪೂರ್ಣವಾಗಿ ಶಿಥಿಲವಾಗಿರುವ 8 ಕಟ್ಟಡಗಳನ್ನು ನೆಲಸಮ ಮಾಡಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ದೇವರಾಜ್‌ ವಿವರಿಸಿದರು.
ಬದಲಿ ವ್ಯವಸ್ಥೆ
ಶಿಥಿಲಾವಸ್ಥೆ ತಲುಪಿರುವ ಶಾಲೆ ಹಾಗೂ ಶಾಲಾ ಕೊಠಡಿಗಳನ್ನು ಗುರುತಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಜವರೇಗೌಡ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದುರಸ್ತಿ ಮಾಡಿ ಉಳ್ಳಾವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಚಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಅಪಾಯದಲ್ಲಿ ಪಾಠ ಕಲಿಯುತ್ತಿದ್ದಾರೆ. ಶಿಥಿಲವಾಗಿರುವ ಸರ್ಕಾರಿ ಶಾಲೆಯ ಕಟ್ಟಡಗಳನ್ನು ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡುವ ಬಗ್ಗೆ ಗಮನಹರಿಸಬೇಕು. ಶ್ರೀನಿವಾಸ್ ಎಸ್‌ಡಿಎಂಸಿ ಅಧ್ಯಕ್ಷ ಉಳ್ಳಾವಳ್ಳಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಗತಿ ಸುಧಾರಿಸಿ ಸರ್ಕಾರಿ ಶಾಲೆಗಳ ಸೌಲಭ್ಯ ಸದುಪಯೋಗ ಮಾಡಿಕೊಳ್ಳಲು ಈಗಲೂ ಸಾಕಷ್ಟು ಮಂದಿ ಅಸಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲಾ ಕಟ್ಟಡಗಳ ಸ್ಥಿತಿಗತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ದಾನಿಗಳು ಸಹ ಸರ್ಕಾರಿ ಶಾಲೆ ಕಟ್ಟಡ ದುರಸ್ತಿಗೆ ಕೈಜೋಡಿಸಬೇಕು. ಹರೀಶ್ ರೈತ ಗೋಣಿಸೋಮನಹಳ್ಳಿ. ಅಗತ್ಯ ಸೌಕರ್ಯ ಕಳೆದ ಶೈಕ್ಷಣಿಕ ವರ್ಷದಲ್ಲಿ 32 ಸ್ಮಾರ್ಟ್ ತರಗತಿಗಳು ಪ್ರಸಕ್ತ ಸಾಲಿನಲ್ಲಿ 31 ಸ್ಮಾರ್ಟ್ ತರಗತಿಗಳ ಸೌಲಭ್ಯವನ್ನು ತಾಲ್ಲೂಕು ಪಂಚಾಯಿತಿ ಅನುದಾನದಿಂದ ಸರ್ಕಾರಿ ಶಾಲೆಗೆ ಒದಗಿಸಲಾಗಿದೆ. 2015-16ನೇ ಸಾಲಿನಲ್ಲಿ ಮುಚ್ಚಿದ್ದ 4 ಶಾಲೆಗಳನ್ನು ಈ ಸಾಲಿನಲ್ಲಿ ಆರಂಭಿಸಲಾಗಿದೆ. 10 ಮಕ್ಕಳ ಮನೆ ಇದೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನರಾಯಪಟ್ಟಣ ಕಟ್ಟಡ ದುರಸ್ತಿಗೆ ₹2 ಕೋಟಿ ಅಗತ್ಯ ತಾಲ್ಲೂಕಿನಲ್ಲಿ ಶಾಲಾ ಕಟ್ಟಡ ದುರಸ್ತಿಗೆ ₹ 2 ಕೋಟಿ ಅಗತ್ಯವಿದ್ದು ₹ 54.24 ಲಕ್ಷ ಬಿಡುಗಡೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ ಎ.ಮಂಜು ಶಾಸಕ ಅರಕಲಗೂಡು ಅನುದಾನದ ನಿರೀಕ್ಷೆ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಅನುದಾನದ ನೀರೀಕ್ಷೆಯಲ್ಲಿದ್ದು ಪಾಠ ಪ್ರವಚನಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ದೇವರಾಜ್ ಬಿಇಒ ಅರಕಲಗೂಡು ಹೆಚ್ಚಿನ ಅನುದಾನ ಒದಗಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಬಹು ಮುಖ್ಯವಾಗಿದ್ದು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕು. ಶಂಕರಯ್ಯ ವಕೀಲ ಅರಕಲಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT