<p><strong>ಅರಸೀಕೆರೆ</strong>: ಇತಿಹಾಸ ಪ್ರಸಿದ್ದ ಮಾಲೇಕಲ್ಲು ತಿರುಪತಿಯಲ್ಲಿ ಭಾನುವಾರ ನಡೆದ ವೆಂಕಟರಮಣ ಸ್ವಾಮಿಯ ತೆಪ್ಪೋತ್ಸವವು ಜನಾಕರ್ಷಣೆಯ ಕೇಂದ್ರವಾಗಿ ಸಹಸ್ರಾರು ಭಕ್ತಾಧಿಗಳು ದೇವರನ್ನು ಕಣ್ತುಂಬಿಕೊಂಡರು.</p>.<p>ಜಾತ್ರ ಮಹೋತ್ಸವದ ನಂತರದ ದಿನಗಳಲ್ಲಿ ಪ್ರತಿವರ್ಷವು ತೆಪ್ಪೋತ್ಸವು ನಡೆಯಲಿದ್ದು ಈ ವರ್ಷವೂ ಭಾನುವಾರ ರಾತ್ರಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ಶ್ರೀದೇವಿ ಭೊದೇವಿ ಸಮೇತರಾಗಿ ದೇವಸ್ಥಾನದ ಪುಷ್ಕರಣಿ ಯಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ತೆಪ್ಪದ ಮೇಲೆ ಕುಳ್ಳಿರಿಸಿ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಉತ್ಸವವು ಸಡಗರದಿಂದ ನಡೆಯಿತು.</p>.<p>ಈ ಧಾರ್ಮಿಕ ಕಾರ್ಯಕ್ರಮವು ನಗರದ ಅರಸೀಕೆರೆ ಪೋಲಿಸ್ ಇಲಾಖೆ ವತಿಯಿಂದ ಪ್ರತಿವರ್ಷವು ನಡೆಯುತ್ತಿದೆ. ಜಲವಿಹಾರದ ವೈಭವವನ್ನು ಸಾವಿರಾರು ಭಕ್ತಾಧಿಗಳು ಸಂತಸದಿಂದ ವೀಕ್ಷಿಸಿ ದೇವರನ್ನು ಪಾರ್ಥಿಸಿದರು. ತೆಪ್ಪೋತ್ಸವದ ಅಂಗವಾಗಿ ಪುಷ್ಕರಣಿಯಲ್ಲಿ ಶುಚಿತ್ವ ಕಾಪಾಡುವುದರ ಜೊತೆಗೆ ಸರಳ ದೀಪಾಲಂಕಾರ ಮಾಡಲಾಗಿತ್ತು.</p>.<p>ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ರಾಜ್ಯದಲ್ಲಿ ಮನೆ ಮಾತಾಗಿರುವ ತಿರುಪತಿಯ ವೆಂಕಟರಮಣ ಸ್ವಾಮಿಗೆ ಅಪಾರ ಭಕ್ತ ವೃಂದ ಇದ್ದು ಎಲ್ಲರನ್ನೂ ಆಶೀರ್ವದಿಸಲಿ. ಧರ್ಮ ಮತ್ತು ಸಂಸ್ಕ್ರತಿಯಿಂದ ಮನುಷ್ಯನ ಜೀವನ ಸುಖಮಯವಾಗಿರುತ್ತದೆ’ ಎಂದು ಹೇಳಿದರು.</p>.<p>ಅರಸೀಕೆರೆ ಡಿ,ವೈಎಸ್ಪಿ ಗೋಪಿನಾಯ್ಕ್, ವೃತ ನಿರೀಕ್ಷಕ ರಾಘವೇಂದ್ರ, ಪ್ರದೀಪ್ ನಾಯ್ಕ್ ಹಾಗೂ ಹಿರಿಯ ಮತ್ತು ಕಿರಿಯ ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ತೆಪ್ಪೋತ್ಸವ ನಂತರ ಪ್ರಸಾದ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ಇತಿಹಾಸ ಪ್ರಸಿದ್ದ ಮಾಲೇಕಲ್ಲು ತಿರುಪತಿಯಲ್ಲಿ ಭಾನುವಾರ ನಡೆದ ವೆಂಕಟರಮಣ ಸ್ವಾಮಿಯ ತೆಪ್ಪೋತ್ಸವವು ಜನಾಕರ್ಷಣೆಯ ಕೇಂದ್ರವಾಗಿ ಸಹಸ್ರಾರು ಭಕ್ತಾಧಿಗಳು ದೇವರನ್ನು ಕಣ್ತುಂಬಿಕೊಂಡರು.</p>.<p>ಜಾತ್ರ ಮಹೋತ್ಸವದ ನಂತರದ ದಿನಗಳಲ್ಲಿ ಪ್ರತಿವರ್ಷವು ತೆಪ್ಪೋತ್ಸವು ನಡೆಯಲಿದ್ದು ಈ ವರ್ಷವೂ ಭಾನುವಾರ ರಾತ್ರಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ಶ್ರೀದೇವಿ ಭೊದೇವಿ ಸಮೇತರಾಗಿ ದೇವಸ್ಥಾನದ ಪುಷ್ಕರಣಿ ಯಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ತೆಪ್ಪದ ಮೇಲೆ ಕುಳ್ಳಿರಿಸಿ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಉತ್ಸವವು ಸಡಗರದಿಂದ ನಡೆಯಿತು.</p>.<p>ಈ ಧಾರ್ಮಿಕ ಕಾರ್ಯಕ್ರಮವು ನಗರದ ಅರಸೀಕೆರೆ ಪೋಲಿಸ್ ಇಲಾಖೆ ವತಿಯಿಂದ ಪ್ರತಿವರ್ಷವು ನಡೆಯುತ್ತಿದೆ. ಜಲವಿಹಾರದ ವೈಭವವನ್ನು ಸಾವಿರಾರು ಭಕ್ತಾಧಿಗಳು ಸಂತಸದಿಂದ ವೀಕ್ಷಿಸಿ ದೇವರನ್ನು ಪಾರ್ಥಿಸಿದರು. ತೆಪ್ಪೋತ್ಸವದ ಅಂಗವಾಗಿ ಪುಷ್ಕರಣಿಯಲ್ಲಿ ಶುಚಿತ್ವ ಕಾಪಾಡುವುದರ ಜೊತೆಗೆ ಸರಳ ದೀಪಾಲಂಕಾರ ಮಾಡಲಾಗಿತ್ತು.</p>.<p>ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ರಾಜ್ಯದಲ್ಲಿ ಮನೆ ಮಾತಾಗಿರುವ ತಿರುಪತಿಯ ವೆಂಕಟರಮಣ ಸ್ವಾಮಿಗೆ ಅಪಾರ ಭಕ್ತ ವೃಂದ ಇದ್ದು ಎಲ್ಲರನ್ನೂ ಆಶೀರ್ವದಿಸಲಿ. ಧರ್ಮ ಮತ್ತು ಸಂಸ್ಕ್ರತಿಯಿಂದ ಮನುಷ್ಯನ ಜೀವನ ಸುಖಮಯವಾಗಿರುತ್ತದೆ’ ಎಂದು ಹೇಳಿದರು.</p>.<p>ಅರಸೀಕೆರೆ ಡಿ,ವೈಎಸ್ಪಿ ಗೋಪಿನಾಯ್ಕ್, ವೃತ ನಿರೀಕ್ಷಕ ರಾಘವೇಂದ್ರ, ಪ್ರದೀಪ್ ನಾಯ್ಕ್ ಹಾಗೂ ಹಿರಿಯ ಮತ್ತು ಕಿರಿಯ ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ತೆಪ್ಪೋತ್ಸವ ನಂತರ ಪ್ರಸಾದ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>