ಕುಮಾರಸ್ವಾಮಿ ಮಾತನಾಡಿ, ‘ಪಕ್ಷದಲ್ಲಿದ್ದುಕೊಂಡು ಕುತ್ತಿಗೆ ಕೊಯ್ಯಬೇಡಿ. ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು. ತೆಂಗಿನ ನುಸಿ ರೋಗಕ್ಕೆ ಪರಿಹಾರ ಹಾಗೂ ಕುಡಿಯುವ ನೀರಿಗೆ ಅನುದಾನ ನೀಡಿದ್ದು ನಾನು. ಆದರೆ, ಚುನಾವಣೆಯಲ್ಲಿ ಗೆದ್ದ ಮೇಲೆ ಸಿದ್ದರಾಮಯ್ಯರಿಂದ ಗೆದ್ದೆ ಅಂದ್ರು. ತಪ್ಪು ಸರಿಪಡಿಸಿಕೊಳ್ಳಿ. ಯಾರಿಗೂ ನಾನು ರಾಜಿ ಆಗೋಲ್ಲ’ ಎಂದು ವಾಗ್ದಾಳಿ ನಡೆಸಿದರು.