<p><strong>ಕೊಣನೂರು:</strong> ಹೋಬಳಿಯ ಹೊಸನಗರ ಬಳಿ ಬೀಡುಬಿಟ್ಟಿದ್ದ ಐದು ಕಾಡಾನೆಗಳ ಗುಂಪನ್ನು ಮಂಗಳವಾರ ಸಂಜೆ ಅರಣ್ಯ ಇಲಾಖೆಯ ಸಿಬ್ಬಂದಿ ಕೆ.ಅಬ್ಬೂರಿನ ಗಡಿ ದಾಟಿಸಿದರು.</p>.<p>ಕತ್ತಲೆಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಿದರು. ಬುಧವಾರ ಬೆಳಿಗ್ಗೆ ಮಾಳೇನಹಳ್ಳಿಯ ಬಳಿ ಪ್ರತ್ಯಕ್ಷವಾದ ಕಾಡಾನೆಗಳು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದವು.</p>.<p>ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನ ಗಮನಿಸಿದರು. ಮಧ್ಯಾಹ್ನದ ವೇಳೆಗೆ ಅಕ್ಕಲವಾಡಿ ಗ್ರಾಮದ ಬಳಿ ತೆರಳಿದವು. ಆನೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದರು. ಜನ ಆನೆಗಳ ಸಮೀಪ ಹೋಗದಂತೆ ನಿಯಂತ್ರಿಸಲು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು.</p>.<p>ಸಂಜೆ ಆನೆಗಳನ್ನು ಪತ್ತೆಹಚ್ಚಲು ಇಲಾಖೆ ಸಿಬ್ಬಂದಿ ಡ್ರೊನ್ ನೆರವು ಪಡೆದರು. ಅಕ್ಕಲವಾಡಿ ಬೆಟ್ಟದ ಬಳಿಗೆ ಆನೆಗಳ ಹಿಂಡು ತಲುಪಿತು. ಹೊಡೆನೂರು, ಮಾಳೇನಹಳ್ಳಿ, ಅಕ್ಕಲವಾಡಿ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಕಾಡಾನೆಗಳು ಸಾಗಿದ್ದರಿಂದ ಬೆಳೆ ನಷ್ಟವಾಗಿದೆ.</p>.<p>ಜನರ ಸುರಕ್ಷೆಗಾಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಸಕಲೇಶಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ಕೊಣನೂರು ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಅರಣ್ಯರಕ್ಷಕ ವಿಶ್ವನಾಥ್, ದೇವೇಂದ್ರ, ಲೋಹಿತ್. ನಾಗೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು:</strong> ಹೋಬಳಿಯ ಹೊಸನಗರ ಬಳಿ ಬೀಡುಬಿಟ್ಟಿದ್ದ ಐದು ಕಾಡಾನೆಗಳ ಗುಂಪನ್ನು ಮಂಗಳವಾರ ಸಂಜೆ ಅರಣ್ಯ ಇಲಾಖೆಯ ಸಿಬ್ಬಂದಿ ಕೆ.ಅಬ್ಬೂರಿನ ಗಡಿ ದಾಟಿಸಿದರು.</p>.<p>ಕತ್ತಲೆಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಿದರು. ಬುಧವಾರ ಬೆಳಿಗ್ಗೆ ಮಾಳೇನಹಳ್ಳಿಯ ಬಳಿ ಪ್ರತ್ಯಕ್ಷವಾದ ಕಾಡಾನೆಗಳು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದವು.</p>.<p>ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನ ಗಮನಿಸಿದರು. ಮಧ್ಯಾಹ್ನದ ವೇಳೆಗೆ ಅಕ್ಕಲವಾಡಿ ಗ್ರಾಮದ ಬಳಿ ತೆರಳಿದವು. ಆನೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದರು. ಜನ ಆನೆಗಳ ಸಮೀಪ ಹೋಗದಂತೆ ನಿಯಂತ್ರಿಸಲು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು.</p>.<p>ಸಂಜೆ ಆನೆಗಳನ್ನು ಪತ್ತೆಹಚ್ಚಲು ಇಲಾಖೆ ಸಿಬ್ಬಂದಿ ಡ್ರೊನ್ ನೆರವು ಪಡೆದರು. ಅಕ್ಕಲವಾಡಿ ಬೆಟ್ಟದ ಬಳಿಗೆ ಆನೆಗಳ ಹಿಂಡು ತಲುಪಿತು. ಹೊಡೆನೂರು, ಮಾಳೇನಹಳ್ಳಿ, ಅಕ್ಕಲವಾಡಿ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಕಾಡಾನೆಗಳು ಸಾಗಿದ್ದರಿಂದ ಬೆಳೆ ನಷ್ಟವಾಗಿದೆ.</p>.<p>ಜನರ ಸುರಕ್ಷೆಗಾಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಸಕಲೇಶಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ಕೊಣನೂರು ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಅರಣ್ಯರಕ್ಷಕ ವಿಶ್ವನಾಥ್, ದೇವೇಂದ್ರ, ಲೋಹಿತ್. ನಾಗೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>