<p><strong>ಹಾಸನ</strong>: ‘ತಡವಾಗಿ ಬರುವುದಕ್ಕೆ ಇದು ಅತ್ತೆ ಮನೆ ಅಂದುಕೊಂಡಿದ್ದೀರಾ? ಏನ್ ಕಚೇರಿ ಇಷ್ಟೊಂದು ಗಲೀಜಾಗಿದೆ. ಅನುಪಯುಕ್ತ ವಸ್ತು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಜನರು ಬಂದ್ರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಿ..’</p>.<p>ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಬೆಳಗ್ಗೆ 10 ಗಂಟೆಗೆ ವಿವಿಧ ಶಾಖೆಗಳಿಗ ಭೇಟಿ ನೀಡಿ, ಯಾರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಯಾರು ವಿಳಂಬ ಮಾಡಿದ್ದಾರೆ ಎಂಬುದನ್ನು ಖುದ್ದು ಪರಿಶೀಲಿಸಿದರು.</p>.<p>‘ಆಧಾರ್ ನೋಂದಾಣಿಗೆ ಎಷ್ಟು ಜನ ಬಂದಿದ್ದಾರೆ. ಬೇಕಾದ ಸಮಯಕ್ಕೆ ಬರುವುದಾದರೆ ಮುಂದಿನ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.</p>.<p>ಈ ವೇಳೆ ಕೆಲವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಸಮಯ ಪರಿಪಾಲನೆ ಮಾಡದವರ ವಿರುದ್ಧ ಸಹಜವಾಗಿಯೇ ಆಕ್ರೋಶಗೊಂಡ ಡಿ.ಸಿ, ‘ರಜಾ ದಿನ ಹೊರತು ಪಡಿಸಿ ನಿತ್ಯ 10 ಗಂಟೆಗೆ ಕರ್ತವ್ಯ ಹಾಜರಾಗಬೇಕು. ಇಲ್ಲವಾದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>‘ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದವರಿಗೆ ಹಾಜರಿ ಕೊಡಬಾರದು. ಕೆಲಸಕ್ಕೆ ಬರಲು ಇಷ್ಟವಿಲ್ಲದವರು ಹೊರಟು ಹೋಗಿ. ಕೆಲಸ ಇಲ್ಲದೆ ತೊಂದರೆ ಪಡುತ್ತಿರುವ ನಿರುದ್ಯೋಗಿಗಳು ಸಾಕಷ್ಟು ಮಂದಿ ಇದ್ದಾರೆ’ ಎಂದು ಏರು ದನಿಯಲ್ಲೇ ತರಾಟೆಗೆ ತೆಗೆದುಕೊಂಡರು.</p>.<p>‘ಡಿ.ಸಿ ಕಚೇರಿ ಆವರಣದಲ್ಲಿ ಹೊರಗಿನವರೂ ಗಂಟೆ ಗಟ್ಟಲೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ನನ್ನ ಇಲಾಖೆಯಲ್ಲಿ ವಿವಿಧ ಕೆಲಸ ಕಾರ್ಯಕ್ಕೆ ಬರುವವರು 1 ಗಂಟೆವರೆಗೆ ವಾಹನ ನಿಲ್ಲಿಸಲು ಅವಕಾಶ ನೀಡಿ. ಇದರ ಮೇಲ್ವಿಚಾರಣೆಗೆ ಒಬ್ಬ ಡಿ.ಗ್ರೂಪ್ ನೌಕರನನ್ನು ನೇಮಿಸಿ’ ಎಂದು ಪಾಷಾ ಹೇಳಿದರು.</p>.<p>ಅಕ್ರಂ ಪಾಷಾ ಅವರು ಡಿ.ಸಿಯಾಗಿ ಬಂದ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಗ್ರಾಮ ವಾಸ್ತವ್ಯ, ಪೌತಿ ಮತ್ತು ಪೋಡಿ ಆಂದೋಲನ, ನಿರಾಶ್ರಿತರ ಕೇಂದ್ರ ಹಾಗೂ ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ಸೇರಿದಂತೆ ಜನಸ್ಮೇಹಿ ಆಡಳಿತಕ್ಕೆ ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ‘ತಡವಾಗಿ ಬರುವುದಕ್ಕೆ ಇದು ಅತ್ತೆ ಮನೆ ಅಂದುಕೊಂಡಿದ್ದೀರಾ? ಏನ್ ಕಚೇರಿ ಇಷ್ಟೊಂದು ಗಲೀಜಾಗಿದೆ. ಅನುಪಯುಕ್ತ ವಸ್ತು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಜನರು ಬಂದ್ರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಿ..’</p>.<p>ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಬೆಳಗ್ಗೆ 10 ಗಂಟೆಗೆ ವಿವಿಧ ಶಾಖೆಗಳಿಗ ಭೇಟಿ ನೀಡಿ, ಯಾರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಯಾರು ವಿಳಂಬ ಮಾಡಿದ್ದಾರೆ ಎಂಬುದನ್ನು ಖುದ್ದು ಪರಿಶೀಲಿಸಿದರು.</p>.<p>‘ಆಧಾರ್ ನೋಂದಾಣಿಗೆ ಎಷ್ಟು ಜನ ಬಂದಿದ್ದಾರೆ. ಬೇಕಾದ ಸಮಯಕ್ಕೆ ಬರುವುದಾದರೆ ಮುಂದಿನ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.</p>.<p>ಈ ವೇಳೆ ಕೆಲವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಸಮಯ ಪರಿಪಾಲನೆ ಮಾಡದವರ ವಿರುದ್ಧ ಸಹಜವಾಗಿಯೇ ಆಕ್ರೋಶಗೊಂಡ ಡಿ.ಸಿ, ‘ರಜಾ ದಿನ ಹೊರತು ಪಡಿಸಿ ನಿತ್ಯ 10 ಗಂಟೆಗೆ ಕರ್ತವ್ಯ ಹಾಜರಾಗಬೇಕು. ಇಲ್ಲವಾದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>‘ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದವರಿಗೆ ಹಾಜರಿ ಕೊಡಬಾರದು. ಕೆಲಸಕ್ಕೆ ಬರಲು ಇಷ್ಟವಿಲ್ಲದವರು ಹೊರಟು ಹೋಗಿ. ಕೆಲಸ ಇಲ್ಲದೆ ತೊಂದರೆ ಪಡುತ್ತಿರುವ ನಿರುದ್ಯೋಗಿಗಳು ಸಾಕಷ್ಟು ಮಂದಿ ಇದ್ದಾರೆ’ ಎಂದು ಏರು ದನಿಯಲ್ಲೇ ತರಾಟೆಗೆ ತೆಗೆದುಕೊಂಡರು.</p>.<p>‘ಡಿ.ಸಿ ಕಚೇರಿ ಆವರಣದಲ್ಲಿ ಹೊರಗಿನವರೂ ಗಂಟೆ ಗಟ್ಟಲೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ನನ್ನ ಇಲಾಖೆಯಲ್ಲಿ ವಿವಿಧ ಕೆಲಸ ಕಾರ್ಯಕ್ಕೆ ಬರುವವರು 1 ಗಂಟೆವರೆಗೆ ವಾಹನ ನಿಲ್ಲಿಸಲು ಅವಕಾಶ ನೀಡಿ. ಇದರ ಮೇಲ್ವಿಚಾರಣೆಗೆ ಒಬ್ಬ ಡಿ.ಗ್ರೂಪ್ ನೌಕರನನ್ನು ನೇಮಿಸಿ’ ಎಂದು ಪಾಷಾ ಹೇಳಿದರು.</p>.<p>ಅಕ್ರಂ ಪಾಷಾ ಅವರು ಡಿ.ಸಿಯಾಗಿ ಬಂದ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಗ್ರಾಮ ವಾಸ್ತವ್ಯ, ಪೌತಿ ಮತ್ತು ಪೋಡಿ ಆಂದೋಲನ, ನಿರಾಶ್ರಿತರ ಕೇಂದ್ರ ಹಾಗೂ ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ಸೇರಿದಂತೆ ಜನಸ್ಮೇಹಿ ಆಡಳಿತಕ್ಕೆ ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>